ಕಲರ್ ಫುಲ್ ಸಿನಿ ದುನಿಯಾದಲ್ಲಿ ಕಾಸ್ಟಿಂಗ್ ಕೌಚ್ ಹೊಸದಲ್ಲ. ಮೀಟೂ ಪ್ರಕರಣಗಳು ಲೆಕ್ಕಕ್ಕೆ ಇಲ್ಲ. ಸ್ಟಾರ್ ನಟಿಯರು ಸಹ ಕಾಸ್ಟಿಂಗ್ ಕೌಚ್, ಮೀಟೂ ಬಗ್ಗೆ ಮಾತ್ನಾಡಿದ್ದಾರೆ. ಹೀಗಾಗಿ ಚಿತ್ರಗಳಲ್ಲಿ ಅವಕಾಶ ಬೇಕು ಅಂದ್ರೆ ನಟಿಯರು ಕಮಿಟ್ ಆಗಬೇಕು ಅನ್ನೋ ವಿಚಾರ ಆಗಾಗ ಕೇಳಿ ಬರುತ್ತೆ. ಇದೀಗ ಮರಾಠಿ ನಟಿ ಈ ಬಗ್ಗೆ ಹೇಳಿದ್ದಾಳೆ.
ನಟಿ ಶ್ರುತಿ ಮರಾಠೆ, ತನ್ಗೆ ಆದ ಕಹಿ ಅನುಭವವನ್ನ ಹಂಚಿಕೊಂಡಿದ್ದಾರೆ. ನಿರ್ಮಾಪಕರೊಬ್ಬರು ತಮ್ಗೆ ಒಂದು ರಾತ್ರಿ ಕಮಿಟ್ ಆಗು ಅಂದಿದ್ರು ಎಂದು ಹೇಳಿಕೊಂಡಿದ್ದಾಳೆ. ಸಿನ್ಮಾದಲ್ಲಿ ಚಾನ್ಸ್ ಬೇಕು ಅಂದ್ರೆ, ಪಲ್ಲಂಗಕ್ಕೆ ಬರಬೇಕು ಎಂದಿದ್ದನಂತೆ. ಇದಕ್ಕೆ ನಟಿ ಶ್ರುತಿ, ಹೀರೋಗೂ ಹೀಗೆ ಕೇಳ್ತೀರಾ ಅಂದಿದ್ಳಂತೆ.
ಈ ಘಟನೆ ಬಳಿಕ ಶ್ರುತಿ ಮರಾಠೆ ನಟಿಸಬೇಕಿದ್ದ ಚಿತ್ರದಿಂದ ಆಕೆಯನ್ನ ಕೈ ಬಿಡಲಾಯಿತು ಎಂದು ಹೇಳಿದ್ದಾಳೆ. ನಾವಯ ಧೈರ್ಯದಿಂದ ಇರದಿದ್ರೆ ಇಂತವರನ್ನ ಸೋಲಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಆದ್ರೆ, ಜನರಿಗೆ ಕಾಡುವ ಪ್ರಶ್ನೆ, ನಟಿಯರು ಪಲ್ಲಂಗಕ್ಕೆ ಕರೆದ ನಿರ್ಮಾಪಕರ ಹೆಸರು ಹೇಳದೆ, ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತ್ನಾಡುವುದು ಯಾಕೆ ಅನ್ನೋದು.