ಮೈತ್ರಿಯಿಂದ ಉಸಿರುಕಟ್ಟುವ ವಾತಾವರಣ: ಎಸ್.ಟಿ ಸೋಮಶೇಖರ್

134

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಸಂಬಂಧಿಸಿದಂತೆ ದಳದ ನಾಯಕರಂತೆ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ವೈಯಕ್ತಿಕವಾಗಿ ನನಗೂ ಅಸಮಾಧನವಿದೆ. ಮೈತ್ರಿಯಿಂದ ಉಸಿರುಕಟ್ಟುವ ವಾತಾವರಣವಿದೆ ಎಂದು ಬಿಜೆಪಿ ಮಾಜಿ ಸಚಿವ ಎಸ್.ಟಿ ಸೋಮಶೇಖರ್ ಅಸಮಾಧಾನ ಹೊರ ಹಾಕಿದ್ದಾರೆ.

ಹಿಂದೆ ಇದೆ ಕಾರಣಕ್ಕೆ ನಾವು ಕಾಂಗ್ರೆಸ್ ಹೊರ ಬಂದು ಬಿಜೆಪಿಗೆ ಸೇರಿದ್ದು. ಈಗ ಇಲ್ಲಿಯೂ ಇದೆ ಪರಿಸ್ಥಿತಿ ಬಂದಿದೆ. ಇದರ ಉದ್ದೇಶ ಏನು ಅನ್ನೋದು ಗೊತ್ತಿಲ್ಲ. ಮೈತ್ರಿಯಿಂದ ಎಲ್ಲರಿಗೂ ಮಾನಸಿಕ ಕಿರುಕುಳವಾಗುತ್ತಿದೆ. ಕಾರ್ಯಕರ್ತರ ವಿರೋಧ ಕಟ್ಟಿಕೊಂಡು ಶಾಸಕರಾಗಲು ಸಾಧ್ಯವಿಲ್ಲ ಎಂದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಎಸ್.ಟಿ ಸೋಮಶೇಖರ್ ಅವರಿಗೆ ಕಷ್ಟವಾಗುತ್ತಿತ್ತು ಎಂದರೆ ಹೊರಗೆ ಹೋಗಬಹುದು.




Leave a Reply

Your email address will not be published. Required fields are marked *

error: Content is protected !!