ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಬಿಜೆಪಿಯಲ್ಲಿ ಜಾಮೂನು ತಿಂದಿದ್ದಾರೆ. ಯಾರೂ ವಿಷ ಕುಡಿದಲ್ಲ ಎಂದಿದ್ದಾರೆ. ಎಸ್.ಟಿ ಸೋಮಶೇಖರ್ ಟೀಕಿಸುವ ಉದ್ದೇಶವಿಲ್ಲ. ಪಕ್ಷದಲ್ಲಿಯೇ ಇದ್ದು ಪಕ್ಷದ ವಿರುದ್ಧ ಮಾತನಾಡಬಾರದು ಎಂದರು.
ಎಸ್.ಟಿ ಸೋಮಶೇಖರ್ ಪಕ್ಷ ಬಿಟ್ಟು ಹೋಗಲಿ ಎಂದು ಹೇಳಿಲ್ಲ. ಹಾಗೇ ಹೇಳಲು ನಾನ್ಯಾರು. ಜಾಮೂನು ತಿಂದು ಸಚಿವರಾದರು. ನಮ್ಮನ್ನು ಸಚಿವರನ್ನಾಗಿ ಮಾಡಿದರು. ಆದರೆ ಮತ್ತೆ ನಮ್ಮ ಸರ್ಕಾರ ಬರಲಿಲ್ಲ. ಒಂದು ವೇಳೆ ಬಂದಿದ್ದರೆ ಹೇಗೆ ಹೇಳುತ್ತಿದ್ದಾರ ಎಂದು ಪ್ರಶ್ನಿಸಿದರು.