ಪ್ರಜಾಸ್ತ್ರ ಸುದ್ದಿ
ಶಿವಮೊಗ್ಗ: ನಾನು ಆಶೀರ್ವಾದ ಪಡೆದು ಬಂದ ಸ್ವಾಮೀಜಿಗಳೆಲ್ಲ ಈಗ ಕಣ್ಣೀರು ಹಾಕುತ್ತಿದ್ದಾರೆ. ಅವರಿಗೆಲ್ಲ ಬೆದರಿಕೆ ಹಾಕುತ್ತಾರೆ ಎಂದರೆ ಇವರ ದರ್ಪ ಎಷ್ಟಿರಬಹುದು ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಗಳಿಗೂ ಕಣ್ಣೀರು ಹಾಕಿಸುತ್ತಾರೆ ಎಂದರೆ ನಾನು ಹೋಗುತ್ತಿರಲಿಲ್ಲ. ಫೋನ್ ನಲ್ಲಿಯೇ ಆಶೀರ್ವಾದ ಪಡೆಯುತ್ತಿದೆ. ನನ್ನ ಪರವಾಗಿ ಇಷ್ಟು ಜನರು ಬಂದಿರುವುದು ನೋಡಿ ಹೃದಯ ತುಂಬಿ ಬಂದಿದೆ ಎಂದರು.