ಪ್ರಜಾಸ್ತ್ರ ಲೈಫ್ ಸ್ಟೈಲ್
ಕರೋನಾ ಬಂದಾಗಿನಿಂದ ಜನರು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಡೆ ಹೆಚ್ಚು ಗಮನ ಹರಿಸ್ತಿದ್ದಾರೆ. ಇದಕ್ಕಾಗಿ ಸಾಕಷ್ಟು ಕಷ್ಟ ಸಹ ಪಡುತ್ತಿದ್ದಾರೆ. ನೈಸರ್ಗಿಕವಾಗಿ ಸಿಗುವ ಪದಾರ್ಥಗಳ ಮೂಲಕವೇ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು.
ಜಾಸ್ತಿ ಮೈ ಕೈ ನೋವು, ಸುಸ್ತು ಇದ್ದರೆ, ನೆಲ್ಲಿಕಾಯಿಯನ್ನು ತಪ್ಪುದಲ್ಲಿ ಕಲೆಸಿ ನೆಕ್ಕಿ. ನಂತರ ಬಿಸಿ ನೀರು ಕುಡಿಯಿರಿ. ಹಾಗೇ ಒಣದ್ರಾಕ್ಷಿಯನ್ನ ನೀರಿನಲ್ಲಿ ನೆನೆಸಿ ತಿನ್ನುವುದ್ರಿಂದ ಹಾಗೂ ಒಣ ಹಣ್ಣುಗಳನ್ನ ತಿನ್ನುವುದ್ರಿಂದ ಸುಸ್ತು ಕಡಿಮೆಯಾಗುತ್ತೆ.
ಕಫದ ಸಮಸ್ಯೆಯಿದ್ರೆ ಶುಂಠಿಯನ್ನ ಜಜ್ಜಿ ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಗ್ಗೆ ಕುದಿಸಿ ಕುಡಿಯಿರಿ. ಹಸಿವು ಆಗುತ್ತಿಲ್ಲ. ಹುಳಿತೇಗು ಬರ್ತಿದ್ರೆ ಹೀಗೆ ಮಾಡಿ.. ಈರುಳ್ಳಿಯನ್ನು ಬೇಯಿಸಿ ಉಪ್ಪು, ನಿಂಬೆರಸ ಬೆರೆಸಿ. ಇದಕ್ಕೆ ತಪ್ಪು, ಸಾಸಿವೆ, ಜೀರಿಗೆ ಹಾಗೂ ಇಂಗಿನ ಒಗ್ಗರಣೆ ಕೊಟ್ಟು, ಅನ್ನದೊಂದಿಗೆ ತಿನ್ನಿ.