ಬ್ರೇಕಿಂಗ್ ನ್ಯೂಸ್: ಕೇಂದ್ರಿಂದ 1.70 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ

368

ನವದೆಹಲಿ: ದೇಶದಲ್ಲಿ ಕರೋನಾದಿಂದ ಹೈರಾಣಾಗಿರುವ ಜನತೆಗೆ ಕೇಂದ್ರ ಸರ್ಕಾರ 1.70 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದೆ. ಬಡವರ, ವಲಸಿಗರು, ಕಾರ್ಮಿಕರು, ಶ್ರಮಿಕ ವರ್ಗ, ಕರೋನಾ ವಿರುದ್ಧ ಹೋರಾಡ್ತಿರುವ ಜನರಿಗಾಗಿ ಈ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ.

ಈ ಸಂಬಂಧ ಮಾಧ್ಯಮಗೋಷ್ಠಿ ನಡೆಸಿದ ಕೇಂದ್ರ ವಿತ್ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕರೋನಾ ವಿರುದ್ಧ ಮುಂಚೂಣೆಯಲ್ಲಿ ನಿಂತು ಹೋರಾಡ್ತಿರುವ ಡಾಕ್ಟರ್ಸ್, ನರ್ಸ್, ಆಶಾ ಕಾರ್ಯಕರ್ತೆಯರು ಸೇರಿ ಪ್ರತಿಯೊಬ್ಬರಿಗೂ 50 ಲಕ್ಷ ರೂಪಾಯಿ ಮೌಲ್ಯದ ಮೆಡಿಕಲ್ ಇನ್ಸೂರೆನ್ಸ್ ನೀಡಲಾಗುವುದು ಎಂದಿದ್ದಾರೆ.

ಬಡವರಿಗಾಗಿ ಗರಿಬ್ ಕಲ್ಯಾಣ ಘೋಷಣೆ ಮಾಡಿದ್ದು, 80 ಕೋಟಿ ಬಡವರು ಇದರ ಪ್ರಯೋಜನ ಪಡೆಯಲಿದ್ದಾರೆ. ಮುಂದಿನ ಮೂರು ತಿಂಗಳ ಕಾಲ ಪ್ರತಿಯೊಬ್ಬರಿಗೆ 5 ಕೆಜಿ ಅಕ್ಕಿ, 5 ಕೆಜಿ ಗೋಧಿ ಹಾಗೂ 1 ಕೆಜಿ ಬೆಳೆ ನೀಡಲಾಗುವುದು ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!