ಎಸ್ಎಸ್ಎಲ್ ಸಿ ಪರೀಕ್ಷೆ: ಜೆರಾಕ್ಸ್ ಅಂಗಡಿಗಳಲ್ಲಿ ಉತ್ತರ ರೆಡಿ

483

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಇಂದು ಎಲ್ಲೆಡೆ ಎಸ್ಎಸ್ಎಲ್ ಸಿ ಗಣಿತ ಪರೀಕ್ಷೆ ನಡೆದಿದೆ. ಈ ಪ್ರಶ್ನೆ ಪತ್ರಿಕೆಯ ಉತ್ತರ ಪತ್ರಿಕೆಗಳು ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದ ಜೆರಾಕ್ಸ್ ಅಂಗಡಿಗಳಲ್ಲಿ ಸಿಕ್ಕಿವೆಯಂತೆ.

ಪರೀಕ್ಷೆ ಪ್ರಾರಂಭವಾದ ಗಂಟೆಯಲ್ಲಿಯೇ ಜೆರಾಕ್ಸ್ ಅಂಗಡಿಗಳಲ್ಲಿ ಉತ್ತರಗಳು ರೆಡಿಯಾಗುತ್ತವೆಯಂತೆ. ಅವುಗಳನ್ನು ಪಡೆದು ವಿದ್ಯಾರ್ಥಿಗಳಿಗೆ ಕೊಡಲು ಹರಸಾಹಸ ಪಟ್ಟ ಘಟನೆ ಇಂದು ನಡೆದಿದೆ. ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಕುರಿತು ತಹಶೀಲ್ದಾರ್ ಸಿ. ಎ ಗುಡದಿನ್ನಿ ಅವರಿಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದು ಜೆರಾಕ್ಸ್ ಅಂಗಡಿಗಳನ್ನು ಬಂದ್ ಮಾಡಿಸಿದ್ದಾರೆ. ಪ್ರಶ್ನೆ ಪತ್ರಿಕೆಯ ಕಾಪಿಯನ್ನು ಜೆರಾಕ್ಸ್ ಅಂಗಡಿಯವರಿಗೆ ಯಾರು ತಲುಪಿಸುತ್ತಾರೆ ಎಂಬುವುದು ತನಿಖೆಯ ನಂತರ ಗೊತ್ತಾಗಬೇಕಾಗಿದೆ.




Leave a Reply

Your email address will not be published. Required fields are marked *

error: Content is protected !!