ಕೊಡಗು: ಗುಜರಾತಿನ ವಾಯು ಚಂಡಮಾರುತದ ಎಫೆಕ್ಟ್ ಇತರೆ ರಾಜ್ಯಗಳ ಮೇಲೂ ಆಗ್ತಿದ್ದು, ಕೊಡಗಿಗೂ ಕಾಲಿಟ್ಟಿದೆ. ಹೀಗಾಗಿ ಶುಕ್ರವಾರದಿಂದ ಭರ್ಜರಿ ಮಳೆ ಶುರುವಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಭೂಕುಸಿತ ಆಗುತ್ತೆ ಅನ್ನೋ ಎಚ್ಚರಿಕೆಯನ್ನ ಹವಮಾನ ಇಲಾಖೆ ನೀಡಿದೆ.
ಕೇರಳಕ್ಕೆ ಪ್ರವೇಶ ಮಾಡಿರುವ ಚಂಡಮಾರುತು, ನಿಧಾನವಾಗಿ ರಾಜ್ಯಕ್ಕೂ ಕಾಲಿಡ್ತಿದೆ. ಇದೀಗ ಕೊಡಗು ಹಾಗೂ ಮೈಸೂರು ಭಾಗದಲ್ಲಿ ಆಗ್ತಿರುವ ಮಳೆ ಮುಂದಿನ ನಾಲ್ಕೈದು ದಿನಗಳಲ್ಲಿ ಅಬ್ಬರಿಸಲಿದೆ. ಇದು ರಾಜ್ಯದಾದ್ಯಂತ ವಿಸ್ತರಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಮುಂದಿನ ವಾರದಿಂದ ಬೆಂಗಳೂರಿನಲ್ಲಿ ಮಳೆ ಆರ್ಭಟ ಶುರುವಾಗಲಿದೆ ಅಂತಾ ಹವಾಮಾನ ಇಲಾಖೆ ತಿಳಿಸಿದೆ.
2018ರಲ್ಲಿ ಕಾಫೀ ನಾಡು ಕೊಡಗಿನಲ್ಲಿ ಸಂಭವಿಸಿದ ಭೂಕುಸಿತ ಇನ್ನೂ ಕಣ್ಮುಂದೆ ಇದೆ. ಅಂದು ರಣಮಳೆಗೆ ಇಡೀ ಕೊಡಗು-ಮಡಿಕೇರಿ ತತ್ತರಿಸಿ ಹೋಗಿತ್ತು. ಇದೀಗ ಮತ್ತೆ ಭೂಕುಸಿತ ಸಂಭವಿಸುತ್ತೆ ಅನ್ನೋ ಎಚ್ಚರಿಕೆ ನೀಡಿದ್ದು, ಇನ್ನೇನು ಅನಾಹುತ ಕಾದಿದೆ ಅನ್ನೋ ಭಯ ಈ ಭಾಗದ ಜನರಲ್ಲಿ ಆವರಿಸಿಕೊಂಡಿದೆ.