ತಂದೆಯ ಬಗ್ಗೆ ನಿರೂಪಕಿ ಅನುಶ್ರೀ ಹೀಗೇಕೆ ಹೇಳಿದರು?

458

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ, ನಟಿ ಅನುಶ್ರೀ ಅವರ ತಂದೆ ಕುರಿತು ಶಿವಲಿಂಗೇಗೌಡ ಎಂಬಾತ ಮಾಧ್ಯಮಕ್ಕೆ ನೀಡಿದ ಮಾಹಿತಿಯಿಂದ, ಅವರು ಸಾಕಷ್ಟು ಬೇಸರ ಮಾಡಿಕೊಂಡಿದ್ದಾರೆ. ಸಂಪತ್ತು ಎಂಬಾತ ತಾನು ಅನುಶ್ರೀ ತಂದೆ ಎಂದು ಹೇಳಿಕೊಂಡಿದ್ದು, ಇದನ್ನು ಶಿವಲಿಂಗೇಗೌಡ ಅನ್ನೋರು ಮಾಧ್ಯಮದ ಎದುರು ಬಂದು ಹೇಳಿದ್ದಾರೆ.

ಪಾರ್ಶುವಾಯುನಿಂದ ಬಳಲುತ್ತಿರುವ ಸಂಪತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊನೆ ಗಳಿಗೆಯಲ್ಲಿ ಮಕ್ಕಳನ್ನು ನೋಡಬೇಕೆಂದು ಹೇಳಿದ್ದಾರೆ. ಸಂಪತ್ತಿಗೆ ಕೆಲಸ ಕೊಟ್ಟು, ಆಸ್ಪತ್ರೆಗೆ ಸೇರಿಸಿರುವ ಶಿವಲಿಂಗೇಗೌಡ, ಸಂಪತ್ ಪತ್ನಿ, ಮಕ್ಕಳ ಬಗ್ಗೆ ಮಾತನಾಡಿದ್ದಾರೆ.

ಈ ವಿಚಾರಕ್ಕೆ ನಿರೂಪಕಿ ಅನುಶ್ರೀ ಬೇಸರ ವ್ಯಕ್ತಪಡಿಸಿದ್ದಾರೆ. ಒಬ್ಬ ವ್ಯಕ್ತಿ ಕಾನೂನಿನ ಪ್ರಕಾರ ಕುಟುಂಬದಿಂದ ದೂರವಾದ ಮೇಲೆ ಯಾವುದೇ ರೀತಿ ಸಂಬಂಧ ಇರುವುದಿಲ್ಲ. 22 ವರ್ಷಗಳ ಹಿಂದೆ ಬಿಟ್ಟು ಹೋದ ವ್ಯಕ್ತಿಯ ಬಗ್ಗೆ ನೀವು ಮಾಧ್ಯಮದ ಮುಂದೆ ಹೇಗೆ ಹೋಗಿ ಹೇಳುತ್ತೀರಿ. ಇದರಿಂದ ನಮಗೆ ಸಾಕಷ್ಟು ಮಾನಸಿಕ ಕಿರಿಕಿರಿಯಾಗುತ್ತಿದೆ. ಮಾಧ್ಯಮದ ಎದುರು ಹೋಗುವುದಕ್ಕೂ ಮೊದಲು ನೀವು ನಮ್ಮನ್ನು ಸಂಪರ್ಕಿಸಬಹುದಿತ್ತು ಎಂದು ಅನುಶ್ರೀ ನೋವು ತೋಡಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!