ಪ್ರಜಾಸ್ತ್ರ ಸುದ್ದಿ
ಬಾಗಲಕೋಟೆ: ಸೋಮವಾರ ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟಗೊಂಡಿದೆ. ಶೇಕಡ 99.99ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಪರೀಕ್ಷೆ ಎಂದ್ಮೇಲೆ ಅಂಕಗಳು ಹೆಚ್ಚು ಕಡಿಮೆ ಬರುವುದು ಸಹಜ. ಆದ್ರೆ, ಮುಧೋಳ ತಾಲೂಕಿನ ಲೋಕಾಪುರ ಪಟ್ಟಣದ ವಿದ್ಯಾರ್ಥಿನಿ ಕಡಿಮೆ ಅಂಕ ಬಂದಿರುವುದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಐಶ್ವರ್ಯ ಶಂಕರ ಬಾರಕೇರ ಅನ್ನೋ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಭೋವಿ ಗಲ್ಲಿಯಲ್ಲಿ ಈ ಕುಟುಂಬ ವಾಸವಾಗಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 10 ವರ್ಷಗಳ ಹಿಂದೆಯೇ ತಂದೆ ತೀರಿಕೊಂಡಿದ್ದು, ತಾಯಿ ಶಾಂತವ್ವ ಸುಣ್ಣದ ವ್ಯಾಪಾರ ಮಾಡಿ ಮಗಳನ್ನ ಓದಿಸ್ತಿದ್ದಳು. ಮಗಳ ದುಡುಕಿನ ನಿರ್ಧಾರ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.