ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯ ಬಿಜೆಪಿ ಘಟಕದ ನೂತನ ಪದಾಧಿಕಾರಿಗಳನ್ನ ನೇಮಕ ಮಾಡಲಾಗಿದೆ. ವಿವಿಧ ಮೋರ್ಚಾ ಹಾಗೂ ಸಮುದಾಯದ ಅಧ್ಯಕ್ಷರನ್ನ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ನೇಮಕ ಮಾಡಿ ಆದೇಶಿಸಿದ್ದಾರೆ.
ರಾಜ್ಯ ಉಪಾಧ್ಯಕ್ಷರಾಗಿ ಅರವಿಂದ ಲಿಂಬಾವಳಿ, ತೇಜಸ್ವಿನಿ ಅನಂತಕುಮಾರ, ಶೋಭಾ ಕರಂದ್ಲಾಜೆ, ಮಾಲಿಕಯ್ಯ ಗುತ್ತೆದಾರ, ಬಿ.ವೈ ವಿಜಯೇಂದ್ರ, ಪ್ರತಾಪ ಸಿಂಹ, ನಿರ್ಮಲಕುಮಾರ ಸುರಾನಾ, ಎಂ.ಬಿ ನಂದೀಶ, ಎಂ.ರಾಜೇಂದ್ರ, ಎಂ.ಶಂಕರಪ್ಪ ಅವರನ್ನ ನೇಮುಕ ಮಾಡಲಾಗಿದೆ.
ಡಿಸಿಎಂ ಅಶ್ವಥನಾರಾಯಣ, ಸಿದ್ದರಾಜು, ಎನ್ ರವಿಕುಮಾರ, ಮಹೇಶ ತೆಂಗಿನಕಾಯಿ ಅವರನ್ನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಕಾರ್ಯದರ್ಶಿಗಳಾಗಿ ಎಸ್. ಕೇಶವಪ್ರಸಾದ, ಭಾರತಿ ಮುಗ್ದುಮ್, ಸತೀಶ ರೆಡ್ಡಿ, ಹೇಮಾವತಿ ನಾಯಕ, ಜಗದೀಶ ಹೀರೆಮನಿ, ತುಳಿಸಿ ಮುನಿರಾಜಗೌಡ, ವಿನಯ ಬಿದರೆ, ಉಲ್ವಲಾ ಬಡವಣ್ಣಾಜೆ, ಕೆ.ಎಸ್ ನವೀನ ಹಾಗೂ ಸುಧಾ ಜಯರುದ್ರೇಶ ಅವರನ್ನ ನೇಮಕ ಮಾಡಲಾಗಿದೆ.
ಲೆಹರ್ ಸಿಂಗ್, ಸುಬ್ಬ ನರಸಿಂಹ ಅವರನ್ನ ರಾಜ್ಯ ಖಜಾಂಚಿಯಾಗಿ ನೇಮಕ ಮಾಡಿದ್ರೆ, ಯುವ ಮೋರ್ಚಾ ಅಧ್ಯಕ್ಷರಾಗಿ ಡಾ.ಸಂದೀಪ, ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಗೀತಾ ವಿವೇಕಾನಂದ, ರೈತ ಮೋರ್ಚಾ ಅಧ್ಯಕ್ಷರಾಗಿ ಈರಣ್ಣ ಕಡಾಡಿ, ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿ ಅಶೋಕ ಗಸ್ತಿ, ಎಸ್.ಸಿ ಮೋರ್ಚಾ ಅಧ್ಯಕ್ಷರಾಗಿ ಚಲವಾದಿ ನರಾಯಣಸ್ವಾಮಿ, ಎಸ್ಟಿ ಮೋರ್ಚಾ ತಿಪ್ಪರಾಜು ಹವಾಲ್ದಾರ್, ಅಲ್ಪಸಂಖ್ಯಾತ ಅಧ್ಯಕ್ಷರಾಗಿ ಮುಜಮಿಲ್ ಬಾಬು ನೇಮಕ ಮಾಡಲಾಗಿದೆ.
ರಾಜ್ಯ ಕಾರ್ಯಾಲಯ ಕಾರ್ಯದರ್ಶಿಯಾಗಿ ಲೋಕೇಶ ಅಂಬೆಕಲ್ಲು, ರಾಜ್ಯ ವಕ್ತರರಾಗಿ ಕ್ಯಾಪ್ಟನ್ ಗಣೇಶ ಕಾರ್ಣಿಕ್ ಅವರನ್ನ ನೇಮಿಸಲಾಗಿದೆ. ಪ್ರಕೋಷ್ಟಕ ಸಂಯೋಜಕರಾಗಿ ಎಂ.ಬಿ ಭಾನುಪ್ರಕಾಶ, ಡಾ.ಎ.ಹೆಚ್ ಶಿವಯೋಗಸ್ವಾಮಿ ಅವರನ್ನ ನೇಮಿಸಲಾಗಿದೆ.