ಸಿಪಿ ಯೋಗೇಶ್ವರ ಹೇಳಿಕೆ ಸತ್ಯಕ್ಕೆ ದೂರ: ಸಚಿವ ಹೆಬ್ಬಾರ

348

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ನೂತನ ಎಂಎಲ್ಸಿ ಸಿ‌.ಪಿ. ಯೋಗೇಶ್ವರ ಹೇಳಿಕೆ ಸತ್ಯಕ್ಕೆ ದೂರವಾದ ಮಾತು ಎಂದು ಸಚಿವ ಶಿವರಾಂ ಹೆಬ್ಬಾರ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತ್ನಾಡಿದ ಅವರು, ನೂತನ ಎಂಎಲ್ಸಿ ಸಿ.ಪಿ ಯೋಗೇಶ್ವರ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಆದ್ರೇ, ಸಿಎಂ ಬಿಎಸ್ವೈ ಸರ್ಕಾರ ನಡೆಸಲು ಯಾರಿಂದಲೂ ಕಲಿತುಕೊಳ್ಳುವ ಅವಶ್ಯಕತೆ ಇಲ್ಲ‌. ಅವರಿಗೆ ನಾಲ್ಕು ದಶಕದ ಅನುಭವ ಇದೆ ಎಂದು ಟಾಂಗ್ ನೀಡಿದರು.

ಮೂರು ವರ್ಷಗಳ ಕಾಲ ಸಿಎಂ ಬಿಎಸ್ವೈ ಅವರೇ ಸಿಎಂಯಾಗಿ ಮುಂದುವರೆಯುತ್ತಾರೆ. ಸಿಎಂ ಬದಲಾವಣೆ ಪ್ರಶ್ನೆನೆ ಇಲ್ಲ. ಸರ್ಕಾರದ ಆಡಳಿತ ಮುಗಿಯುವವರೆಗೂ ಸಿಎಂಯಾಗಿ ಬಿಎಸ್ವೈ ಇರುತ್ತಾರೆ ಅಂತಾ ಹೇಳಿದ್ರು. ಇನ್ನು ಕೋವಿಡ್ ವಿಚಾರದಲ್ಲಿ ಸಿದ್ದರಾಮಯ್ಯನವರು ಕಾಂಗ್ರೆಸ್ ಕಣ್ಣಿನಿಂದ ನೋಡಬಾರದು. ಕೋವಿಡ್ ಯಾವ ಪಕ್ಷವನ್ನೂ ಬಿಟ್ಟಿಲ್ಲ. ಪಕ್ಷ ಬಣದಿಂದ ಕೋವಿಡ್ ರೋಗವನ್ನ ಅಳೆಯುವುದಕ್ಕೆ ಆಗಲ್ಲ ಎಂದು ವಾಗ್ದಾಳಿ ನಡೆಸಿದ್ರು.




Leave a Reply

Your email address will not be published. Required fields are marked *

error: Content is protected !!