ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಇಂದು ಆಗುತ್ತೆ, ನಾಳೆ ಆಗುತ್ತೆ ಅನ್ನೋದೆ ಆಗಿದೆ. ಹೀಗಾಗಿ ಸಚಿವರಾಗಬೇಕು ಅನ್ನೋ ಆಸೆ ಇಟ್ಟುಕೊಂಡು ಕುಂತವರ ಸ್ಥಿತಿ ಹೇಳದಾಗಿದೆ. ಇಂದು ಸಿಎಂ ಬೊಮ್ಮಾಯಿ ದೆಹಲಿಗೆ ಹೊರಟಿದ್ದು, ಸಚಿವಾಂಕ್ಷಿಗಳಲ್ಲಿ ಖುಷಿ ಇಲ್ಲ ಎನ್ನಲಾಗುತ್ತಿದೆ.
ಕೇಂದ್ರ ಗೃಹ ಸಚಿವರು ರಾಜ್ಯಕ್ಕೆ ಬಂದು ಹೋದರು. ಸಿಎಂ ಆಗಾಗ ದೆಹಲಿಗೆ ಹೋಗಿ ಬರುತ್ತಲೇ ಇದ್ದಾರೆ. ಆದರೆ, ಸಂಪುಟ ವಿಸ್ತರಣೆ ವಿಚಾರ ಮಾತ್ರ ಬಗೆಹರಿಯುತ್ತಿಲ್ಲ. ಇದ್ದರಿಂದಾಗಿ ನಾಳೆ ಬಾ ಕಥೆ ಆಗಿದೆಯಾ ಅನ್ನೋ ಪ್ರಶ್ನೆ ಮೂಡಿದೆ. ಇದೇ ಕಾರಣಕ್ಕೆ ಮಂತ್ರಿಗಿರಿ ಮೇಲೆ ಆಸೆಪಟ್ಟವರು, ಸಿಎಂ ದೆಹಲಿಗೆ ಹೊರಟಿದ್ದರು ಆಸಕ್ತಿ ತೋರಿಸುತ್ತಿಲ್ಲವಂತೆ.