ಬೆಂಗಳೂರು: ರಾಜ್ಯ ರಾಜಕೀಯದಲ್ಲಿನ ಈಗಿನ ಪರಿಸ್ಥಿತಿ ನೋಡಿದ್ರೆ, ಜನರಿಗೆನೇ ಜಿಗುಪ್ಸೆ ಬರ್ತಿದೆ. ಮೂರು ಬಿಟ್ಟವರು ಊರಿಗೆ ದೊಡ್ಡವರು ಅನ್ನೋ ಮಾತಿನಂತಾಗಿದೆ ಕರ್ನಾಟಕದ ರಾಜಕಾರಣಿಗಳ ನಡೆ ನುಡಿ. ಹೀಗಿರುವಾಗ ಸ್ಪೀಕರ್ ವಿರುದ್ಧ ಅತೃಪ್ತ ಶಾಸಕರು ಸಲ್ಲಿಸಿರುವ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿದೆ.
ನಾವು ರಾಜೀನಾಮೆ ಸಲ್ಲಿಸಿದ್ರೂ, ಸ್ಪೀಕರ್ ಅವರು ವಿನಾಃಕಾರಣ ವಿಳಂಬ ಮಾಡ್ತಿದ್ದಾರೆ. ಉದ್ದೇಶಪೂರ್ಕವಾಗಿಯೇ ಅವರು ರಾಜೀನಾಮೆ ಪಡೆಯಲು ಹಿಂದೇಟು ಹಾಕ್ತಿದ್ದಾರೆ ಅಂತಾ ಆರೋಪಿಸಿ ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ಸುಪ್ರೀಂನಲ್ಲಿ 10.30ಕ್ಕೆ ನಡೆಯಲಿದೆ. 11ಕ್ಕೆ ಏನಾಗುತ್ತೆ ಕಾದು ನೋಡಿ ಅಂತಾ ರಾಜೀನಾಮೆ ಸಲ್ಲಿಸಿರುವ ಶಾಸಕರು ಸವಾಲು ಹಾಕಿದ್ದಾರೆ.
ಮಾಜಿ ಅಟಾರ್ನಿ ಜನರಲ್ ಮುಕಲ ರೊಹಟಗಿ ಅತೃಪ್ತರ ಪರವಾಗಿ ವಾದ ಮಂಡಿಸಲಿದ್ದಾರೆ. ಅಭಿಷೇಕ ಮನು ಸಿಂಘ್ವಿ ಅವರು ಕಾಂಗ್ರೆಸ್ ಪರವಾಗಿ ವಾದ ಮಂಡಿಸಲಿದ್ದಾರೆ. ಮುಖ್ಯ ನ್ಯಾಯಮೂರ್ತಿ ರಂಜನ ಗೊಗಾಯ್ ನೇತೃತ್ವದಲ್ಲಿ ವಿಚಾರಣೆ ನಡೆಯಲಿದೆ.
ವಿಚಾರಣೆ ನಡೆದಾದ ಬಳಿಕ ಲಜ್ಜೆಗೆಟ್ಟ ರಾಜ್ಯ ರಾಜಕಾರಣದಲ್ಲಿ ಏನಾಗುತ್ತೆ? ಇನ್ನು ಯಾವ ಮಟ್ಟಕ್ಕೆ ನಮ್ಮ ಮಹಾನ್ ಜನಪ್ರತಿನಿಧಿಗಳು ಇಳಿಯುತ್ತಾರೆ ಅನ್ನೋದು ನೋಡಬೇಕಿದೆ.