ಪ್ರಜಾಸ್ತ್ರ ಸುದ್ದಿ
ಚಾಮರಾಜನಗರ: ದೇವರ ಹುಂಡಿಯಲ್ಲಿ ಚಿತ್ರ-ವಿಚಿತ್ರ ಬೇಡಿಕೆಯ ಪತ್ರಗಳು ಪತ್ತೆಯಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಇದೀಗ ತಾಲೂಕಿನ ಮುಕ್ಕಡಹಳ್ಳಿ ಗ್ರಾಮದಲ್ಲಿರುವ ಮಾಯಮ್ಮ, ದೇವಮ್ಮ ದೇವಸ್ಥಾನದ ಹುಂಡಿಯಲ್ಲಿ ಕಾಣಿಕೆ ಜೊತೆಗೆ ಹಲವು ಮನವಿ ಪತ್ರಗಳು ಪತ್ತೆಯಾಗಿವೆ.
‘ದೇವರೆ ನನ್ನ ಮೂರ್ತಿನಾ ಬಿಟ್ಟು ನನ್ನ ಕುತ್ತಿಗೆಗೆ ಬೇರೆ ಯಾರೂ ತಾಳಿ ಕಟ್ಟಬಾರದು’ ಎಂದು ಯುವತಿಯೊಬ್ಬಳು ಬೇಡಿಕೊಂಡಿದ್ದಾಳೆ. ಯುವಕನೊಬ್ಬ ಹುಡುಗಿ ಕರುಣಿಸು ಎಂದು ಬರೆದು ಹಾಕಿದ್ದಾನೆ. ದೇವರ ರಾಜ್ಯ ಸಮಿಪಿಸಿದೆ ಎಂದು ಬರೆದಿರುವ ಪತ್ರ ಸಿಕ್ಕಿದೆ. ಕ್ರಿಸ್ತ್ ಹುಟ್ಟಿದ ಬಗೆ ಹಾಗೂ ಕ್ರಿಸ್ತನನ್ನು ನಂಬಿದೆಲ್ಲ ಬರೆದು ಪತ್ರವನ್ನು ಹುಂಡಿಯಲ್ಲಿ ಹಾಕಲಾಗಿದೆ.
ಕೆಲ ದಿನಗಳ ಹಿಂದೆ ಹುಂಡಿ ಒಡೆದು ಕಾಣಿಕೆ ಎಣಿಸಲಾಗಿದೆ. ಆಗ ಇದೆಲ್ಲವೂ ಕಾಣಿಸಿದೆ. ಯುವತಿ, ಯುವಕನ ಪ್ರಾರ್ಥನೆ ಫಲಿಸದೆ ಇಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ ಇಂತಹ ವಿಚಿತ್ರ ಪತ್ರಗಳು ರಾಜ್ಯದ ಬೇರೆ ಬೇರೆ ಭಾಗದ ದೇವಸ್ಥಾನಗಳ ಹುಂಡಿಯಲ್ಲಿ ಪತ್ತೆಯಾಗುತ್ತಲೇ ಇವೆ.