ಹುಣಸಗಿಯಲ್ಲಿ ಕಾರು ಅಪಘಾತ: ಇಬ್ಬರ ಸಾವು

165

ಪ್ರಜಾಸ್ತ್ರ ಸುದ್ದಿ

ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನ ರಾಜನಕೊಳೂರ ಗ್ರಾಮದ ಹತ್ತಿರ ಕಾರೊಂದು ಅಪಘಾತವಾಗಿ ಇಬ್ಬರು ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ. ಮಲ್ಲಿಕಾರ್ಜುನ್(35) ಹಾಗೂ ಪರಶುರಾಮ್(32) ಮೃತ ದುರ್ದೈವಿಗಳು.

ಶಾಲೆಯಿಂದ ಮಕ್ಕಳನ್ನು ಕರೆದುಕೊಂಡು ಬರಲು ಕಾಮನಟಗಿಯಿಂದ ನಾರಾಯಣಪುರಕ್ಕೆ ಮಲ್ಲಿಕಾರ್ಜುನ್ ಹೋಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಕಾಲುವೆಗೆ ಡಿಕ್ಕಿ ಹೊಡೆದಿದೆ. ಕೊಡೆಕಲ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.




Leave a Reply

Your email address will not be published. Required fields are marked *

error: Content is protected !!