ಪ್ರಜಾಸ್ತ್ರ ಸುದ್ದಿ
ಶ್ರೀನಿವಾಸಪುರ: ಅಪ್ರಾಪ್ತ ಬಾಲಕಿ ಹಾಗೂ ಯುವಕನೊಬ್ಬ ಒಂದೇ ಮರಕ್ಕೆ ನೇಣು ಹಾಕಿಕೊಂಡಿರುವ ಘಟನೆ ತಾಲೂಕಿನ ಯಲವಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಬೆಳ್ಳಂಬೆಳಗ್ಗೆ ಇದನ್ನು ನೋಡಿದ ಜನರಿಗೆ ಶಾಕ್ ಆಗಿದೆ.
ಗಂಗಾಧರ್ ಹಾಗೂ ನಿಕಿತಾ ಅನ್ನೋ ಇಬ್ಬರು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಬ್ಬರು ಜಗಜೀವನಪಾಳ್ಯದವರೆಂದು ತಿಳಿದು ಬಂದಿದೆ. 10ನೇ ತರಗತಿಯ ನಿಕಿತಾ ಶಾಲೆಯ ಸಮವಸ್ತ್ರದಲ್ಲೇ ನೇಣು ಹಾಕಿಕೊಂಡಿದ್ದಾಳೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.