ಸೂರ್ಯಸತ್ಯ

217

ಹಾಸನ ಮೂಲದ ಯುವ ಬರಹಗಾರ್ತಿ ಹಾಗೂ ರಂಗಭೂಮಿ ಕಲಾವಿದೆ ಉಮ್ಮೆಕುಲ್ಸುಮ್ ಹಾಸನ ಅವರು ಬರೆದ ಕವಿತೆ ಇಲ್ಲಿದೆ.

ಸೂರ್ಯ ತನ್ನೆಡೆ ಎಂದು

ಪಶ್ಚಿಮದ ನಾಯಕನಂತೆ ಹೊಳೆಯುತ ನಿಂತಿರುವಾ….ನಕ್ಷತ್ರ!

ಸೂರ್ಯ ತನ್ನವನೆ ಎಂದು ಪೂರ್ವದ ನೇತೃತ್ವವಹಿಸಿ ಹುಣ್ಣಿಮೆಯ ಸೊಗಸನು ಸಾರುತಿರುವಾ…. ಚಂದಿರ!!

ಪೂರ್ವ-ಪಶ್ಚಿಮಗಳೆಡೆಯಲಿ

ಆ ಚಂದಿರ ಈ ನಕ್ಷತ್ರಗಳ ನಡುವಲಿ ಕೇಂದ್ರಬಿಂದುವಾಗಿರುವಾ… ಸೂರ್ಯ!!!

ಚಂದಿರನನು ಬೆಳಗಿಸುತ

ನಕ್ಷತ್ರದೊಂದಿಗೆ ಹೊಳೆಯುತತನ್ನ ಕಿರಣಗಳಿಂದ ಜಗತ್ತನು ಆವರಿಸುವಾ…. ಸೂರ್ಯ!!!!

ಕಾಮನಬಿಲ್ಲಿನ ರಂಗುರಂಗಿನ

ಕನಸನು ಬಿತ್ತುತ

ಜೀವಸಂಕುಲಕೆ ಜೀವ ನೀಡುವ ಜೀವಾಮೃತವೇ…. ಆ ಸೂರ್ಯ!!!

 ಈ ಸತ್ಯವ ಅರಿಯಬೇಕಿದೆ

ಅವನ ದಾರಿಯಲಿ ಸಾಗಬೇಕಿದೆ ನೀ……ಮಾನವ




Leave a Reply

Your email address will not be published. Required fields are marked *

error: Content is protected !!