ಹಾಸನ ಮೂಲದ ಯುವ ಬರಹಗಾರ್ತಿ ಹಾಗೂ ರಂಗಭೂಮಿ ಕಲಾವಿದೆ ಉಮ್ಮೆಕುಲ್ಸುಮ್ ಹಾಸನ ಅವರು ಬರೆದ ಕವಿತೆ ಇಲ್ಲಿದೆ.
ಸೂರ್ಯ ತನ್ನೆಡೆ ಎಂದು
ಪಶ್ಚಿಮದ ನಾಯಕನಂತೆ ಹೊಳೆಯುತ ನಿಂತಿರುವಾ….ನಕ್ಷತ್ರ!
ಸೂರ್ಯ ತನ್ನವನೆ ಎಂದು ಪೂರ್ವದ ನೇತೃತ್ವವಹಿಸಿ ಹುಣ್ಣಿಮೆಯ ಸೊಗಸನು ಸಾರುತಿರುವಾ…. ಚಂದಿರ!!
ಪೂರ್ವ-ಪಶ್ಚಿಮಗಳೆಡೆಯಲಿ
ಆ ಚಂದಿರ ಈ ನಕ್ಷತ್ರಗಳ ನಡುವಲಿ ಕೇಂದ್ರಬಿಂದುವಾಗಿರುವಾ… ಸೂರ್ಯ!!!
ಚಂದಿರನನು ಬೆಳಗಿಸುತ
ನಕ್ಷತ್ರದೊಂದಿಗೆ ಹೊಳೆಯುತತನ್ನ ಕಿರಣಗಳಿಂದ ಜಗತ್ತನು ಆವರಿಸುವಾ…. ಸೂರ್ಯ!!!!
ಕಾಮನಬಿಲ್ಲಿನ ರಂಗುರಂಗಿನ
ಕನಸನು ಬಿತ್ತುತ
ಜೀವಸಂಕುಲಕೆ ಜೀವ ನೀಡುವ ಜೀವಾಮೃತವೇ…. ಆ ಸೂರ್ಯ!!!
ಈ ಸತ್ಯವ ಅರಿಯಬೇಕಿದೆ
ಅವನ ದಾರಿಯಲಿ ಸಾಗಬೇಕಿದೆ ನೀ……ಮಾನವ