ಮತ್ತೊಂದು ಗೆಲುವಿಗೆ ಭಾರತ ಸಜ್ಜು

366

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಸಿಡ್ನಿಯ ಕ್ರೀಡಾಂಗಣದಲ್ಲಿ ನಾಳೆ ಭಾರತ ಹಾಗೂ ನೆದರ್ಲ್ಯಾಂಡ್ ನಡುವೆ ಪಂದ್ಯ ನಡೆಯಲಿದೆ. ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಇದು 2ನೇ ಪಂದ್ಯವಾಗಿದೆ. ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ರೋಚಕ ಗೆಲುವು ದಾಖಲಿಸಿದೆ.

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ನೆದರ್ಲ್ಯಾಂಡ್ ಸೋಲು ಅನುಭವಿಸಿದ್ದು, ನಾಳೆಯ ಪಂದ್ಯ ಆ ತಂಡಕ್ಕೆ ಮುಖ್ಯವಾಗಿದೆ. ಆದರೆ, ಬಲಿಷ್ಠ ಭಾರತದ ಎದುರು ಅದು ಕಷ್ಟ. 2011ರ ವಿಶ್ವಕಪ್ ನಲ್ಲಿ ಭಾರತದ ವಿರುದ್ಧ ಪಂದ್ಯ ಆಡಿದ್ದೇ ಕೊನೆಯದು.

ಪಾಕ್ ವಿರುದ್ಧ ಘರ್ಜಿಸಿದ ಕಿಂಗ್ ಕೊಹ್ಲಿ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಉಳಿದಂತೆ ಕೆ.ಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ ನಾಯಕ ರೋಹಿತ್ ಶರ್ಮಾ ಸಹ ರನ್ ಹೊಳೆ ಹರಿಸುವ ಆಟಗಾರರಾಗಿದ್ದಾರೆ. ಇನ್ನು ಅರ್ಷದೀಪ್ ಸಿಂಗ್, ಅಕ್ಷರ್ ಪಟೇಲ್, ಚಾಹಲ್, ಅಶ್ವಿನ್, ಶಮಿ ಸೇರಿ ಇತರರ ಬೌಲಿಂಗ್ ಮೇಲೆಯೂ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಮಧ್ಯಾಹ್ನ 1.30ಕ್ಕೆ ಪಂದ್ಯ ಶುರುವಾಗಲಿದೆ.




Leave a Reply

Your email address will not be published. Required fields are marked *

error: Content is protected !!