ಪ್ರವಾಹದಲ್ಲೂ ತನ್ನ ಮರಿಯ ರಕ್ಷಣೆ ಮಾಡಿದ ಶ್ವಾನ

360

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ತಾರಾಪುರ ಗ್ರಾಮ ಭೀಮಾ ನದಿಯಿಂದಾಗಿ ಪ್ರವಾಹ ಉಂಟಾಗಿದೆ. ಪ್ರತಿ ಬಾರಿಯೂ ಈ ಗ್ರಾಮದ ಜನಕ್ಕೆ ಇದೆ ಸಮಸ್ಯೆ. ಮಹಾರಾಷ್ಟ್ರದಲ್ಲಿ ಮಳೆಯಾಗಿ ಉಜನಿ, ವೀರ ಡ್ಯಾಂನಿಂದ ಭೀಮಾ ನದಿಗೆ ನೀರು ಹರಿ ಬಿಟ್ಟರೂ ಅಂದ್ರೆ, ಈ ಗ್ರಾಮ ನೆರೆಗೆ ತುತ್ತಾಗುತ್ತೆ.

ಇದೀಗ ಎಲ್ಲೆಡೆ ಭರ್ಜರಿಯಾಗಿ ಮಳೆಯಾಗ್ತಿದೆ. ಇದರ ಪರಿಣಾಮ ಉಜನಿ ಹಾಗೂ ವೀರ ಡ್ಯಾಂನಿಂದ ನೀರು ಹರಿಬಿಡಲಾಗಿದೆ. ಇದ್ರಿಂದಾಗಿ ಭೀಮಾ ನದಿ ತುಂಬಿ ಹರಿಯುತ್ತಿದೆ. ಇದರ ನಡುವೆ ಮೂಕಪ್ರಾಣಿ ಶ್ವಾನವೊಂದು ತನ್ನ ಮರಿಯ ರಕ್ಷಣೆ ಮಾಡ್ತಿರುವ ದೃಶ್ಯ ಮನ ಮಿಡಿಯುವಂತಿದೆ.

ತಾರಾಪುರ ಗ್ರಾಮ ಪ್ರವಾಹಕ್ಕೆ ಸಿಲುಕಿಕೊಂಡಿದೆ. ಇಲ್ಲಿನ ಜನರು ಸುರಕ್ಷಿತ ಸ್ಥಳಗಳಿಗೆ ಹೋಗ್ತಿದ್ದಾರೆ. ಆದ್ರೆ, ಮೂಕ ಪ್ರಾಣಿಗಳ ಗೋಳು ಕೇಳೋದ್ಯಾರು ಹೇಳಿ? ನಾಯಿ ತನ್ನ ಪುಟ್ಟ ಮರಿಯನ್ನ ಬಾಯಿಯಲ್ಲಿ ಹಿಡಿದುಕೊಂಡು ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗ್ತಿರುವುದು ನೋಡಿದ್ರೆ ತಾಯಿ ಪ್ರೀತಿ ಅನ್ನೋದು ಬರೀ ಮನುಷ್ಯನಲ್ಲಿ ಮಾತ್ರವಲ್ಲ ಪ್ರತಿ ಜೀವರಾಶಿಯಲ್ಲಿ ಇರುತ್ತೆ ಅನ್ನೋದಕ್ಕೆ ಸಾಕ್ಷಿಯಾಗುತ್ತವೆ ಇಂಥಾ ಘಟನೆಗಳು.




Leave a Reply

Your email address will not be published. Required fields are marked *

error: Content is protected !!