ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಅಪಾರ ಪ್ರಮಾಣದ ಮಳೆಯಿಂದಾಗಿ ಹಿಮಾಚಲ ಪ್ರದೇಶದಲ್ಲಿ ಪ್ರವಾಹ, ಭೂಕುಸಿತ ಸೃಷ್ಟಿಯಾಗಿ ಸಾಕಷ್ಟು ಸಾವು ನೋವು ಸಂಭವಿಸಿದೆ. ಹೀಗಾಗಿ ಇತರೆ ರಾಜ್ಯಗಳು ಪರಿಹಾರ ನೀಡುವ ಮೂಲಕ ಸಹಾಯದ ಹಸ್ತ ಚಾಚುತ್ತಿವೆ. ಇದೇ ರೀತಿ ಕರ್ನಾಟಕದಿಂದಲೂ ಪರಿಹಾರ ಘೋಷಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆದೇಶದ ಮೇರೆಗೆ ಹಣಕಾಸು ಇಲಾಖೆ 15 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ. ಈ ಕುರಿತು ಸಿಎಂ ಟ್ವೀಟ್ ಮಾಡಿದ್ದು, ಅಲ್ಲಿನ ಜನರ ಒಳತಿಗಾಗಿ ಕರ್ನಾಟಕದ ಜನತೆಗೆ ಪ್ರಾರ್ಥಿಸುತ್ತದೆ ಎಂದಿದ್ದಾರೆ.