ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಚಂದ್ರಯಾನ-3 ಯಶಸ್ಸಿನ ಸನೀಹದಲ್ಲಿದೆ. ಲ್ಯಾಂಡ್ ಆಗಲು ದಿನ, ಸಮಯ ಎಲ್ಲವೂ ನಿಗದಿಯಾಗಿದೆ. ಹೀಗಿರುವಾಗ ಬಹುಭಾಷಾ ನಟ ಪ್ರಕಾಶ್ ರಾಜ್ ಸೋಷಿಯಲ್ ಮೀಡಿಯಾದಲ್ಲಿ ಮಾಡಿರುವ ಟ್ವೀಟ್, ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಟ್ವೀಟರ್ ನಲ್ಲಿ ಬ್ರೇಕಿಂಗ್ ನ್ಯೂಸ್ ಚಂದ್ರನಿಂದ ಬಂದ ಮೊದಲ ಫೋಟೋ, ವಿಕ್ರಮ್ ಲ್ಯಾಂಡರ್ ವಾವ್ ಎಂದು ಬರೆದು ಟೀ ಮಾರುವ ವ್ಯಕ್ತಿಯ ವಿಡಂಬನಾತ್ಮಕವಾಗಿ ಇರುವ ಫೋಟೋ ಹಾಕಿದ್ದಾರೆ. ಇದಕ್ಕೆ ನೆಟ್ಟಿಗರು ವಾಗ್ದಾಳಿ ನಡೆಸಿದ್ದಾರೆ.
ರಾಜಕೀಯವಾಗಿ ಯಾರನ್ನೋ ಟೀಕಿಸುವ ಭರದಲ್ಲಿ ಇನ್ನೇನೋ ಮಾಡಿಕೊಂಡಿದ್ದು, ಹೆಮ್ಮೆ ಪಡುವ ಹೊತ್ತಿನಲ್ಲಿ ಈ ರೀತಿ ಪೋಸ್ಟ್ ಮಾಡಿದ್ದಕ್ಕೆ ಜನರ ಆಕ್ರೋಶಕ್ಕೆ ಗುರಿಯಾಗಬೇಕಾಗಿದೆ.