ನಟ ಪ್ರಕಾಶ್ ರಾಜ್ ಗೆ ಕೊಲೆ ಬೆದರಿಕೆ

307

ಪ್ರಜಾಸ್ತ್ರ ಸುದ್ದಿ

ಬಹುಭಾಷಾ ನಟ ಪ್ರಕಾಶ್ ರಾಜ್ ಅವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ಈ ಕುರಿತು ಸ್ವತಃ ಪ್ರಕಾಶ್ ರಾಜ್ ತಮ್ಮ ಟ್ವೀಟರ್ ನಲ್ಲಿ ವಿಡಿಯೋದ ಪೋಸ್ಟ್ ಹಂಚಿಕೊಂಡಿದ್ದಾರೆ. ನೋಡ್ರಪಾ ಉತ್ತರ ಕುಮಾರರು ಕೊಲೆ ಬೆದರಿಕೆ ಹಾಕ್ತಾ ಇದ್ದಾರೆ. ಏನ್ ಮಾಡಾಣ ವಸಿ ಯೋಳಿ ಎಂದು ಬರೆದಿದ್ದಾರೆ.

ಕೊಲೆ ಬೆದರಿಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಸೌಜನ್ಯ ಪ್ರಕರಣದಲ್ಲಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಮಂಪರು ಪರೀಕ್ಷೆ ಮಾಡಿಸಿದರೆ ಏನು ತಪ್ಪು ಅಂತಾ ಕೇಳ್ತಿಯಲ್ಲ. ಸೌಜನ್ಯ ಪ್ರಕರಣದಲ್ಲಿ ನೀನೇ ಆರೋಪಿ ಯಾಕಾಗಿರಬಾರದು, ನಿನ್ನ ಮಂಪರು ಪರೀಕ್ಷೆ ಮಾಡಿಸಿದರೆ ಏನು ತಪ್ಪು ಅಂತಾ ನಾ ನಿನಗೆ ಕೇಳಿದರೆ ಹೆಂಗಿರುತ್ತೆ. 24 ಗಂಟೆಯೊಳಗೆ ಧರ್ಮಸ್ಥಳದಲ್ಲಿ ಬಂದು ಕ್ಷಮೆ ಕೇಳದಿದ್ದರೆ ನಿನ್ನ ಮನೆ ಮುಂದೆ ನಿನ್ನ ಹೆಣ ಬಿದ್ದಿರುತ್ತೆ ಬೀ ಕೇರ್ ಫುಲ್ ಎಂದಿರುವ ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋವನ್ನು ತಮ್ಮ ಟ್ವೀಟರ್ ನಲ್ಲಿ ಹಂಚಿಕೊಂಡು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ್, ಕರ್ನಾಟಕ ಪೊಲೀಸ್ ಮಹಾನಿರ್ದೇಶಕರು, ಕರ್ನಾಟಕ ಪೊಲೀಸರಿಗೆ ನಟ ಪ್ರಕಾಶ್ ರಾಜ್ ಟ್ಯಾಗ್ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!