ಪ್ರಜಾಸ್ತ್ರ ಸಿನಿಮಾ ಡೆಸ್ಕ್
ನಟ ಸುದೀಪ್, ಸಿಎಂ ಬೊಮ್ಮಾಯಿ ಪರ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದ್ದೆ ತಡ, ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ನಟ ಸುದೀಪರನ್ನು ಕೆಲವರು ಬೆಂಬಲಿಸಿದರೆ ಇನ್ನು ಕೆಲವರು ವಿರೋಧಿಸುತ್ತಿದ್ದಾರೆ. ಹೀಗಾಗಿ ಸುದೀಪ್ ಈಗ ಚರ್ಚೆಯ ವಸ್ತುವಾಗಿದ್ದಾರೆ. ಇನ್ನು ನಟ ಪ್ರಕಾಶ್ ರಾಜ್, ಸರಣಿ ಟ್ವೀಟ್ ಮೂಲಕ ಸುದೀಪಗೆ ಟಾಂಗ್ ಕೊಟ್ಟಿದ್ದಾರೆ.
ನೋಡ್ರಪ್ಪ.. ನಿಮ್ ಮಾಮನೊ.. ನಿಮ್ ಅತ್ತೇನೊ ನಿಮ್ಮ ಕಷ್ಟಕಾಲದಲ್ಲಿ ಸಹಾಯ ಮಾಡಿದ್ದರೆ ನೀವು ದುಡಿದಿದ್ದರಲ್ಲಿ ಶೇ.10, 20, 30 ಕೊಡಿ. ಅದು ನಿಮ್ಮಿಷ್ಟ. ಆದ್ರೆ ಪ್ರಜೆಗಳ ಶೇ.30 ಕೊಳ್ಳೆ ಹೊಡೆಯಕ್ ಬಿಡ್ಬೇಡಿ ಅಷ್ಟೆ ಅಷ್ಟೆ ಎಂದಿದ್ದಾರೆ. ಇನ್ನೊಂದು ಟ್ವೀಟ್ ನಲ್ಲಿ, ಸುದೀಪ್ ಒಬ್ಬ ಮೇರು ಕಲಾವಿದನಾಗಿ ಎಲ್ಲ ವರ್ಗದ ಪ್ರೀತಿಯಿಂದ ಬೆಳೆದ ನೀವು, ಜನ ಸಾಮಾನ್ಯನ ದನಿಯಾಗುವಿರಿ ಎಂದು ಆಶಿಸಿದ್ದೆ. ಆದರೆ ತಾವು ಒಂದು ರಾಜಕೀಯ ಪಕ್ಷದ ಬಣ್ಣ ಬಳೆದುಕೊಳ್ಳುತ್ತೀರಿ ಎಂದು ನಿರೀಕ್ಷಿಸಿರಿಲ್ಲ. ಇನ್ನು ಮುಂದೆ ನಿಮ್ಮನ್ನೂ ನಿಮ್ಮ ಪಕ್ಷವನ್ನು ಪ್ರಶ್ನಿಸುವ ಜನ ದನಿಗೆ ತಯಾರಾಗಿರಿ ಎಂದಿದ್ದಾರೆ.
ಸುದೀಪ್ ಒಂದು ಪಕ್ಷದ ವ್ಯಕ್ತಿ ಪರ ಪ್ರಚಾರಕ್ಕೆ ಹೋದರೆ ವಿರೋಧಗಳು ವ್ಯಕ್ತವಾಗುತ್ತವೆ ಎಂದು ಗೊತ್ತಿಲ್ಲದೆ ಹೋಗಿರಲಕ್ಕೆ ಸಾಧ್ಯವಿಲ್ಲ. ಗೊತ್ತಿದ್ದೂ ಹೋಗಿದ್ದಾರೆ ಅಂದರೆ ಅದು ಅವರ ವೈಯಕ್ತಿಕ ಆಯ್ಕೆ. ಆದರೆ, ಅವರು ಬಿಜೆಪಿ ವಿರುದ್ಧದ ಜನರ ಆಕ್ರೋಶ, ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಅನಾವಾರ್ಯವಾಗಿ ಉತ್ತರಿಸಲೇಬೇಕು ಅನ್ನೋದು ಮಾತ್ರ ಸತ್ಯ.