ತಳವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರಕ್ಕಾಗಿ ಪ್ರಧಾನಿಗೆ ಪತ್ರ ಚಳವಳಿ

607

ಪ್ರಜಾಸ್ತ್ರ ಸುದ್ದಿ

ಸಿಂದಗಿ: ರಾಷ್ಟ್ರಪತಿಯಿಂದ ಅಂಕಿತ ಪಡೆದಿದ್ರೂ ರಾಜ್ಯದಲ್ಲಿ ತಳವಾರ ಹಾಗೂ ಪರಿವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡುತ್ತಿಲ್ಲವೆಂದು ರಾಜ್ಯದ ತುಂಬಾ ಇಡೀ ಸಮುದಾಯ ವಿಭಿನ್ನ ರೀತಿಯ ಹೋರಾಟ ನಡೆಸಿಕೊಂಡು ಬರ್ತಿದೆ.

ವಿಜಯಪುರ, ಕಲಬುರಗಿ, ಬಾಗಲಕೋಟೆ, ಬೀದರ, ಬಳ್ಳಾರಿ ಸೇರಿದಂತೆ ರಾಜ್ಯದ ಅನೇಕ ಕಡೆ ವಿಭಿನ್ನ ಹೋರಾಟ ನಡೆಸಿಕೊಂಡು ಬರಲಾಗ್ತಿದೆ. ಅದೇ ರೀತಿ ಸಿಂದಗಿ ತಾಲೂಕಿನಲ್ಲಿ ನಿರಂತರವಾಗಿ ಒಂದಲ್ಲ ಒಂದು ರೀತಿಯ ಹೋರಾಟ ನಡೆದಿದೆ.

ಇಂದು ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ, ತಳವಾರ ಮತ್ತು ಪರಿವಾರ ಸಮಾಜಕ್ಕೆ ಶೀಘ್ರವಾಗಿ ಎಸ್ಟಿ ಪ್ರಮಾಣ ಪತ್ರ ನೀಡಬೇಕೆಂದು ಆಗ್ರಹಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ. ಗ್ರಾಮಸ್ಥರು ಪತ್ರ ಚಳವಳಿ ನಡೆಸುವ ಮೂಲಕ ಪಿಎಂಗೆ ಪತ್ರ ಬರೆದಿದ್ದಾರೆ.

ಈ ವೇಳೆ ಆನಂದ ತಳವಾರ, ಸುರೇಶ ತಳವಾರ, ಪ್ರಕಾಶ ಯಡ್ರಾಮಿ, ಬಸಲಿಂಗಪ್ಪಗೌಡ ಕಾಚಾಪೂರ, ಸಂಗಣ್ಣ ಡಿಗ್ಗಿ, ಶಾಂತಪ್ಪ ತಳವಾರ, ಬಸಣ್ಣ ತಳವಾರ, ದೇವೇಂದ್ರ ತಳವಾರ, ಶಾಂತಪ್ಪ ಗೂಗಲ್ ಸೇರಿದಂತೆ ಗ್ರಾಮಸ್ಥರು ಪ್ರಧಾನಿಗೆ ಪತ್ರ ಬರೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!