ಭೀಕರ ಅಪಘಾತ: ಮಗು ಸೇರಿ 6 ಜನರ ದುರ್ಮರಣ

210

ಪ್ರಜಾಸ್ತ್ರ ಸುದ್ದಿ

ಧಾರವಾಡ: ಕಾರು ಹಾಗೂ ಟ್ರಕ್ ನಡುವೆ ಗುರುವಾರ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮಗು ಸೇರಿ 6 ಜನರು ಸಾವನ್ನಪ್ಪಿದ ಘಟನೆ ತಾಲೂಕಿನ ತೇಗೂರು ಗ್ರಾಮದ ಹತ್ತಿರ ನಡೆದಿದೆ. ನಿಂಗಪ್ಪ ಮುಡ್ಡೊಜಿ(29), ಮಹಾಂತೇಶ ಮುಡ್ಡೋಜಿ(40), ಬಸವರಾಜ ನರಗುಂದ(35), ಗುರುಸಿದ್ದಪ್ಪ ರಾಮದುರ್ಗ(35) ಹಾಗೂ 5 ವರ್ಷದ ಮಗು ಶ್ರೀಕುಮಾರ ಹಾಗೂ ಪಾದಚಾರಿ ಈರಣ್ಣ ರಾಮನಗೌಡರ ಮೃತ ದುರ್ದೈವಿಗಳು.

ಇನ್ನು ಘಟನೆಯಲ್ಲಿ 4ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕಾರು ಹಾಗೂ ಟ್ರಕ್ ಧಾರವಾಡದ ಕಡೆ ಹೊರಟಿದ್ದವು. ಈ ವೇಳೆ ಕಾರು ಚಾಲಕ ಪಾದಚಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ಹಿಂಬದಿಯಿಂದ ಬರುತ್ತಿದ್ದ ಟ್ರಕ್ ಕಾರಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ 6 ಜನರು ಮೃತಪಟ್ಟ ದುರಂತ ನಡೆದು ಹೋಗಿದೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!