ಪ್ರಜಾಸ್ತ್ರ ಸುದ್ದಿ
ಸಿಂದಗಿ: ಪುರಸಭೆ ಅಧ್ಯಕ್ಷ ಸ್ಥಾನದ ಸಲುವಾಗಿ ಆರಂಭದಿಂದಲೇ ಜಟಾಪಟಿ ನಡೆದು ಕೋರ್ಟ್ ಅಂಗಳದವರೆಗೂ ಹೋಗಿ ಬಂದು ಮಾಡಿ, ಕೊನೆಗೂ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಅವರ ವಿರುದ್ಧ ಅವಿಶ್ವಾಸ ಮಂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುರುವಾರ ನಡೆದ ಸಮಾನ್ಯ ಸಭೆಯಲ್ಲಿ 18 ಸದಸ್ಯರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಿದರು. ಹೀಗಾಗಿ ಉಪಾಧ್ಯಕ್ಷ ಹಾಸೀಂಪೀರ್ ಆಳಂದ ಹಂಗಾಮಿ ಅಧ್ಯಕ್ಷರಾಗಿ ಆಯ್ಕೆ ಆದರು.
ಸದಸ್ಯರಾದ ಬಿ.ಕೆ ತಾಂಬೋಳಿ, ರಾಜಣ್ಣ ನಾರಾಯಣಕರ ಅವರು ಕಲಬುರ್ಗಿ ಹೈಕೋರ್ಟ್ ಪೀಠಕ್ಕೆ ಅವಿಶ್ವಾಸ ಮಂಡನೆ ಸಂಬಂಧ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಕೋರ್ಟ್ ಆದೇಶದಂತೆ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ 23 ಸದಸ್ಯರ ಪೈಕಿ ಹಾಜರಿದ್ದ 18 ಸದಸ್ಯರೆಲ್ಲ ಅವಿಶ್ವಾಸ ಮಂಡನೆ ಪರವಾಗಿ ಮತ ಚಲಾಯಿಸಿದರು.
ಮೊದಲ ಅವಧಿಯ ಅಧ್ಯಕ್ಷರ ಆಡಳಿತಾಧಿಕಾರ ಮೇ 4ರವರೆಗೂ ಇದೆ. ಉಪಾಧ್ಯಕ್ಷ ಹಾಸೀಂಪೀರ್ ಆಳಂದ ಹಂಗಾಮಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದು, ಅವಿಶ್ವಾಸ ಮಂಡನೆ ಪರ ಇರುವ ಸದಸ್ಯರೆಲ್ಲ ಅವರಿಗೆ ಅಭಿನಂದನೆ ಸಲ್ಲಿಸಿದರು.