ಪ್ರಜಾಸ್ತ್ರ ಸುದ್ದಿ
ಜಮ್ಮು-ಕಾಶ್ಮೀರ: ಕಳೆದ 24 ಗಂಟೆಯಲ್ಲಿ ಭಾರತೀಯ ಸೇನೆ 8 ಜನ ಉಗ್ರರನ್ನ ಹತ್ಯೆ ಮಾಡಿದೆ. ಜಮ್ಮು-ಕಾಶ್ಮೀರದ ಪುಲ್ವಾಮಾ ಹಾಗೂ ಶೋಪಿಯಾನ್ ನಲ್ಲಿ ಅಡಗಿ ಕುಳಿತಿದ್ದ 8 ಜನ ಉಗ್ರರನ್ನ ಹತ್ಯೆ ಮಾಡಲಾಗಿದೆ.
ಪುಲ್ವಾಮಾದ ಆವಂತಿಪುರದಲ್ಲಿ ಮೂವರನ್ನ ಹಾಗೂ ಶೋಪಿಯಾನದಲ್ಲಿ ಐವರನ್ನ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಸ್ಥಳೀಯ ಜಾಮೀಯಾ ಮಸೀದಿಯಲ್ಲಿ ಇಬ್ಬರು ಅಡಗಿ ಕುಳಿತಿದ್ದರು. ಶರಣಾಗುವಂತೆ ಸೂಚಿಸಿದ್ರೂ ಕೇಳದೆ, ಗುಂಡಿನ ದಾಳಿ ನಡೆಸಿದ್ರಂತೆ. ಈ ವೇಳೆಸಿಆರ್ ಪಿಎಫ್ ಯೋಧರು ಕಾರ್ಯಚರಣೆ ನಡೆಸಿ ಅವರನ್ನ ಹತ್ಯೆ ಮಾಡಿದ್ದಾರೆ.
ಇನ್ನು ಇತ್ತ ಚೀನಿಯರ ಸಂಘರ್ಷ ನಡೆದಿದೆ. ಪೂರ್ವ ಲಡಾಕ್ ಗಾಲ್ವಾನ್ ಪ್ರದೇಶದ ತನ್ನದೆಂದು ವಾದಿಸುತ್ತಾ ಜಗಳಕ್ಕೆ ಇಳಿದಿದೆ. ಇದರಿಂದಾಗಿ 20ಕ್ಕೂ ಹೆಚ್ಚು ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. ಅಲ್ದೇ, ಸೆರೆ ಹಿಡಿದಿದ್ದ 10 ಜನ ಸೈನಿಕರನ್ನ ಬಿಡುಗಡೆ ಮಾಡಿದೆ. ಹೀಗಾಗಿ ಒಂದ್ಕಡೆ ಭಯೋತ್ಪಾದಕರನ್ನ ಮಟ್ಟ ಹಾಕಬೇಕು. ಇನ್ನೊಂದ್ಕಡೆ ಈ ಚೀನಿಯರ ಉಪಟಕ್ಕೆ ಅಂತ್ಯ ಹಾಡಬೇಕಿದೆ.