ಈ ವಾರ ಸಚಿವ ಸಂಪುಟ ರಚನೆಯಿಲ್ಲ: ಸಿಎಂ ಬೊಮ್ಮಾಯಿ

274

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಬುಧವಾರ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡರು. ಈಗ ಸಚಿವ ಸಂಪುಟ ರಚನೆಯ ಕಸರತ್ತು ನಡೆಯುತ್ತಿದೆ. ಯಡಿಯೂರಪ್ಪ ಸಚಿವ ಸಂಪುಟದಲ್ಲಿದ್ದ ಎಷ್ಟು ಜನಕ್ಕೆ ಗೇಟ್ ಪಾಸ್ ಕೊಡಲಾಗುತ್ತೆ? ಯಾರಿಗೆ ಉಳಿಸಿಕೊಳ್ಳಲಾಗುತ್ತೆ? ಹೊಸದಾಗಿ ಯಾರಿಗೆ ಅವಕಾಶ ಕೊಡಲಾಗುತ್ತೆ ಅನ್ನೋ ಚರ್ಚೆ, ಲಾಬಿ ನಡೆದಿದೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತ್ನಾಡಿದ ಸಿಎಂ ಬೊಮ್ಮಾಯಿ, ಈ ವಾರ ಸಚಿವ ಸಂಪುಟ ರಚನೆಯಾಗಲ್ಲ. ದೆಹಲಿಗೆ ಹೋಗಿ ಬಂದ್ಮೇಲೆ ಹೈಕಮಾಂಡ್ ಜೊತೆಗೆ ಚರ್ಚಿಸಿದ ಬಳಿಕ ಸಚಿವ ಸಂಪುಟ ರಚನೆ ಎಂದಿದ್ದಾರೆ.

ಇಂದು ಹುಬ್ಬಳ್ಳಿಯ ಮೂಲಕ ಕಾರವಾರಕ್ಕೆ ತೆರಳಲಿದ್ದಾರೆ. ಪ್ರವಾಹದಿಂದ ಉಂಟಾದ ನಷ್ಟದ ಕುರಿತು ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಇದಕ್ಕೂ ಮೊದ್ಲು ಅವರು ಯಡಿಯೂರಪ್ಪ ಮನೆಗೆ ಭೇಟಿ ನೀಡಿ ಒಂದಿಷ್ಟು ಚರ್ಚೆ ನಡೆಸಿದ್ರು.




Leave a Reply

Your email address will not be published. Required fields are marked *

error: Content is protected !!