ಶಾಸಕ ಟಿ.ಬಿ ಜಯಚಂದ್ರಗೆ ಬೆದರಿಕೆ ಕರೆ

173

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಶಾಸಕ ಟಿ.ಬಿ ಜಯಚಂದ್ರ ಅವರಿಗೆ ಬೆದರಿಕೆ ಕರೆಗಳು ಬರುತ್ತೇವೆ ಎಂದು ಸ್ವತಃ ಅವರೆ ಹೇಳಿದ್ದಾರೆ. ನೈಸ್ ಸಂಸ್ಥೆ ಅಕ್ರಮ ಪ್ರಕರಣಕ್ಕೆ ಸಂಬಂಧ ವರದಿ ನೀಡಿದ ಹಿನ್ನೆಲೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಶಿರಾ ಕ್ಷೇತ್ರ ಶಾಸಕ ಟಿ.ಬಿ ಜಯಚಂದ್ರ ಹೇಳಿದ್ದಾರೆ.

ರಾಮನಗರ ಜಿಲ್ಲೆ ಬಿಡದಿಗೆ ಹೋಗಿ ಪರಿಶೀಲನೆ ಮಾಡಿ ವರದಿ ನೀಡಿದ್ದೇನೆ. ಇದಾದ ನಂತರ ರೈತರ ಹೆಸರಿನಲ್ಲಿ ಕರೆ ಮಾಡಿ, ನಿಮಗೂ ನೈಸ್ ಸಂಸ್ಥೆ ಅಕ್ರಮಕ್ಕೂ ಏನು ಸಂಬಂಧ? ಇದರಲ್ಲಿ ನೀವು ಯಾಕೆ ಬರುತ್ತಿದ್ದೀರಿ ಎಂದು ಬೆದರಿಕೆ ಹಾಕುತ್ತಿದ್ದಾರೆ ಅಂತಾ ಸ್ವತಃ ಶಾಸಕರು ಹೇಳುತ್ತಿದ್ದಾರೆ. ಇದಕ್ಕೆ ಅವರೆ ಸರ್ಕಾರ ಏನು ಕ್ರಮ ತೆಗೆದುಕೊಳ್ಳುತ್ತೆ ಕಾದು ನೋಡಬೇಕಿದೆ.




Leave a Reply

Your email address will not be published. Required fields are marked *

error: Content is protected !!