ಪ್ರಜಾಸ್ತ್ರ ಸುದ್ದಿ
ಭಟ್ಕಳ: ಮುರ್ಡೇಶ್ವರದ ಸಮುದ್ರದಲ್ಲಿ ಈಜಲು ತೆರಳಿದ್ದ ಪ್ರವಾಸಿಗರು ಅಲೆಗಳ ಹೊಡೆತಕ್ಕೆ ಸಿಲುಕು ಮುಳುಗುತ್ತಿದ್ದರು. ಅವರನ್ನ ಜೀವರಕ್ಷಕರು ಭಾನುವಾರ ರಕ್ಷಣೆ ಮಾಡಿದ್ದಾರೆ. ಬೆಂಗಳೂರು ಮೂಲದ ಮೂವರನ್ನ ರಕ್ಷಿಸಲಾಗಿದೆ.
ಸಿಲಿಕಾನ್ ಸಿಟಿಯ ಕತ್ರೆಗುಪ್ಪೆಯಿಂದ ಬಂದಿದ್ದ ಕಾಂದಲಮ್ಮ(40), ಸಂಜಯ(18) ಹಾಗೂ ಸಂಜನಾ(15) ಎಂಬುವರು ಈಜಲು ಸಮುದ್ರಕ್ಕೆ ಇಳಿದಿದ್ದಾರೆ. ಈ ವೇಳೆ ಅಲೆಗೆ ಸಿಲುಕಿದ್ದಾರೆ. ಇದನ್ನ ಗಮನಿಸಿದ ಜೀವ ರಕ್ಷಕ ಸಿಬ್ಬಂದಿ ಮೂವರ ಪ್ರಾಣ ಉಳಿಸಿದ್ದಾರೆ.