‘ತಮಿಳುನಾಡು ಸಿಎಂರನ್ನ ಟಿವಿ ರಿಮೋಟ್ ಮಾಡಿದ ಮೋದಿ’

251

ಪ್ರಜಾಸ್ತ್ರ ಸುದ್ದಿ

ಚೆನ್ನೈ: ತಮಿಳುನಾಡು ಚುನಾವಣೆಯ ಕಾವು ಜೋರಾಗುತ್ತಿದೆ. ಕಾಂಗ್ರೆಸ್ ಯುವ ನಾಯಕ ರಾಹುಲ ಗಾಂಧಿ, ಪ್ರಧಾನಿ ಮೋದಿ ಹಾಗೂ ಸಿಎಂ ಎಳಪ್ಪಾಡಿ ಪಳನಿಸ್ವಾಮಿ ವಿರುದ್ಧ ಭರ್ಜರಿ ವಾಗ್ದಾಳಿ ನಡೆಸಿದ್ದಾರೆ. ತಿರುನೇಳವೇಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತ್ನಾಡಿದ ಅವರು, ತಮಿಳುನಾಡನ್ನ ಟಿವಿ ತರ ಅನ್ಕೊಂಡ ಮೋದಿ ಸಿಎಂರನ್ನ ರಿಮೋಟ್ ತರ ಉಪಯೋಗಿಸ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ತಮಿಳುನಾಡು ಸಿಎಂ ಭ್ರಷ್ಟರಾಗಿದ್ದಾರೆ. ಹೀಗಾಗಿ ಅವರನ್ನ ನಿಯಂತ್ರಿಸುವ ಮೂಲಕ ಜನರನ್ನ ಕಂಟ್ರೋಲ್ ಮಾಡಬಹುದೆಂದು ಮೋದಿ ಅಂದ್ಕೊಂಡಿದ್ದಾರೆ. ರಿಮೋಟ್ ಬಳಿಸಿ ವಾಲ್ಯುಮ್ ಕಡಿಮೆ ಹೆಚ್ಚಿಗೆ ಮಾಡ್ತಿದ್ದಾರೆ. ಆದ್ರೆ, ತಮಿಳುನಾಡಿನ ಜನ ರಿಮೋಟ್ ಬ್ಯಾಟರಿ ತೆಗೆದು ಒಗೆಯುತ್ತಾರೆ ಎಂದು ಹೇಳುವ ಮೂಲಕ ಪಿಎಂ-ಸಿಎಂ ಇಬ್ಬರಿಗೂ ಟಾಂಟ್ ಕೊಟ್ಟಿದ್ದಾರೆ.




Leave a Reply

Your email address will not be published. Required fields are marked *

error: Content is protected !!