ಬೆಂಗಳೂರು: ನಿನ್ನೆ ತಡರಾತ್ರಿಯಿಂದ ಭರ್ಜರಿಯಾಗಿ ನಗರದಲ್ಲಿ ಮಳೆ ಸುರಿದಿದೆ. ಅದೇ ರೀತಿ ಇಂದು ಸಹ ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಶನಿವಾರ ತಡರಾತ್ರಿ ಬಂದ ಮಳೆಯಿಂದಾಗಿ ಮೆಜೆಸ್ಟಿಕ್, ಮೈಸೂರ ಬ್ಯಾಂಕ್ ಸರ್ಕಲ್, ಹೆಬ್ಬಾಳ, ಶಾಂತಿ ನಗರ, ಸಂಜಯ ನಗರ, ಯಶವಂತಪುರ, ಗಿರಿನಗರ, ಕೋರಮಂಗಲ, ಶ್ರೀನಿವಾಸನಗರ, ಶಿವಾನಂದ ಸರ್ಕಲ್, ಮಲ್ಲೇಶ್ವರಂ ಸೇರಿದಂತೆ ಬಹುತೇಕ ಕಡೆ ರಸ್ತೆಗಳೆಲ್ಲಾ ಜಲಾವೃತಗೊಂಡಿದ್ವು.
ಇಂದು ಸಹ ಬೆಂಗಳೂರಿನಲ್ಲಿ ಭರ್ಜರಿಯಾಗಿ ಮಳೆಯಾಗುವ ಸಾಧ್ಯತೆಯಿದೆ. ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದೆ. ವೀಕೆಂಡ್ ಮಸ್ತಿ ಮಾಡಲು ಹೋಗುವವರು ಸ್ವಲ್ಪ ಎಚ್ಚರಿಕೆಯಿಂದ ಇರೋದು ಮುಖ್ಯ. ಇಲ್ದೇ ಹೋದ್ರೆ ಮಳೆಯಲ್ಲಿ ಸಿಕ್ಕು ಪಡಬಾರದ ಪಾಡು ಅನುಭವಿಸಬೇಕಾಗುತ್ತೆ.