ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಇಂದು ಕರೋನಾ ಸೋಂಕಿನಿಂದಾಗಿ ಬರೋಬ್ಬರಿ 592 ಜನರು ಮೃತಪಟ್ಟಿದ್ದಾರೆ. ಈ ಮೂಲಕ ಮೊದಲ ಬಾರಿಗೆ ರಾಜ್ಯದಲ್ಲಿ ಇಷ್ಟೊಂದು ಸಾವು ಸಂಭವಿಸುವ ಮೂಲಕ ಜನರನ್ನ ತೀವ್ರ ಆತಂಕಕ್ಕೆ ದೂಡಲಾಗಿದೆ. ಇದುವರೆಗೂ 17,804 ಜನರು ಸಾವನ್ನಪ್ಪಿದ್ದಾರೆ.
ಇಂದು 48781 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 1838885 ಜನರಿಗೆ ಇಲ್ಲಿಯ ತನಕ ಸೋಂಕು ಕಾಣಿಸಿಕೊಂಡಿದೆ. ಇವತ್ತು 28,623 ಜನರು ಡಿಸ್ಚಾರ್ಜ್ ಆಗಿದ್ದು, 1284420 ಮಂದಿ ಗುಣಮುಖರಾಗಿದ್ದಾರೆ. 536641 ಪ್ರಕರಣಗಳು ಸಕ್ರಿಯವಾಗಿವೆ. ಜಿಲ್ಲಾವಾರು ಸೋಂಕಿತರ ವಿವರ ನೋಡುವುದಾದರೆ..