ನವದೆಹಲಿ: ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಇಡಿ ಅಧಿಕಾರಿಗಳ ವಶದಲ್ಲಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಸದ್ಯ ಡಿಕೆ ಶಿವಕುಮಾರ ತಿಹಾರ್ ಜೈಲಿನಲ್ಲಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿ ಸುರೇಶಕುಮಾರ ಕೈಠಾ ನೇತೃತ್ವದ ಏಕ ಸದಸ್ಯಪೀಠ ಇಂದು ಅರ್ಜಿ ವಿಚಾರಣೆ ನಡೆಸಲಿದೆ. ಈ ಮೊದ್ಲು ಸಲ್ಲಿಸಿದ್ದ ಅರ್ಜಿಯನ್ನ ಮುಂದೂಡಲಾಗಿತ್ತು. ಹೀಗಾಗಿ ಸೆಪ್ಟೆಂಬರ್ 4ರಿಂದ ನ್ಯಾಯಾಂಗ ಬಂಧನದಲ್ಲಿರುವ ಡಿಕೆಶಿ ತಿಹಾರ್ ಜೈಲಿನಲ್ಲಿದ್ದಾರೆ. ಇಂದು ಜಾಮೀನು ನೀಡಿದ್ರೆ ಕೆಲ ಷರತ್ತುಗಳನ್ನ ವಿಧಿಸಿಬಹುದು. ಇಡಿ ಅಧಿಕಾರಿಗಳ ಪರ ವಕೀಲರ ವಾದ ಒಪ್ಪಿಕೊಂಡ್ರೆ ಮತ್ತೆ ತಿಹಾರ ಜೈಲ್ ಫಿಕ್ಸ್ ಆಗುತ್ತೆ.