ಸಿಂದಗಿ: ಸಿಡಿಲು ಬಡೆದು ರೈತನೊಬ್ಬ ಮೃತಪಟ್ಟಿರುವ ಘಟನೆ ತಾಲೂಕಿನ ಬೋಮ್ಮನಳ್ಳಿ ಗ್ರಾಮದಲ್ಲಿ ನಡೆದಿದೆ. ಇಂದು ಸಂಜೆ ಸುಮಾರು 6.30ರ ವೇಳೆಯಲ್ಲಿ ಈ ಒಂದು ಘಟನೆ ನಡೆದಿದೆ.
ಬೋಮ್ಮನಳ್ಳಿ ಗ್ರಾಮದ 65 ವರ್ಷದ ಶ್ರೀಮಂತ ದುಂಡಪ್ಪ ಮಂದೇವಾಲಿ ಮೃತ ದುರ್ದೈವಿಯಾಗಿದ್ದಾರೆ. ಜಮೀನಿಂದ ಮನೆಗೆ ಬರುವಾಗ ಈ ಒಂದು ಅನಾಹುತ ಸಂಭವಿಸಿದೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.