ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕಳೆದ ವಾರ ರಾಜಧಾನಿಯಲ್ಲಿ ಸುರಿದ ಭರ್ಜರಿ ಮಳೆಯಿಂದ ಜನರು ಇನ್ನೂ ಸುಧಾರಿಸಿಕೊಂಡಿಲ್ಲ. ಹೀಗಿರುವಾಗ ಇಂದು ಮತ್ತೆ ಭಾರಿ ಮಳೆಯಾಗುತ್ತೆ ಅನ್ನೋ ಎಚ್ಚರಿಕೆ ನೀಡಲಾಗಿದೆ. ಇದ್ರಿಂದಾಗಿ ಸಿಲಿಕಾನ್ ಸಿಟಿ ಜನರ ವಾರಂತ್ಯಕ್ಕೆ ಟೆನ್ಷನ್ ಶುರುವಾಗಿದೆ.
ಪಶ್ಚಿಮ ಬಂಗಾಳದಲ್ಲಿನ ವಾಯುಭಾರ ಕುಸಿತದ ಎಫೆಕ್ಟ್ ಬೆಂಗಳೂರಿನ ಮೇಲೆ ಜೋರಾಗಲಿದೆಯಂತೆ. ಶುಕ್ರವಾರದಿಂದ ನವೆಂಬರ್ 3ರ ತನಕ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.