ಪ್ರಜಾಸ್ತ್ರ ಸುದ್ದಿ
ಕಾರವಾರ: ಚೌಕ್ತೆ ಚಂಡಮಾರುತದಿಂದಾಗಿ ಕಾರವಾರ ಸೇರಿದಂತೆ ಸುತ್ತಮುತ್ತ ಭಾಗದಲ್ಲಿ ಶನಿವಾರದಿಂದಲೇ ಭಾರಿ ಗಾಳಿ, ಮಳೆಯಾಗ್ತಿದೆ. ಇನ್ನು ಕಳೆದ ತಡರಾತ್ರಿ ಭಾರಿ ಗಾಳಿ ಬೀಸಿದ್ರಿಂದ ಹಲವು ಬೃಹತ್ ಮರಗಳು ಉರುಳಿ ಬಿದ್ದಿವೆ. ಹಬ್ಬುವಾಡದಲ್ಲಿ ಮರವೊಂದು ಬಿದ್ದ ಪರಿಣಾಮ ರಾಜ್ಯ ಹೆದ್ದಾರಿ ಬಂದ್ ಆಗಿತ್ತು.
ನಗರ ಸಿಬ್ಬಂದಿ ಬೆಳಗ್ಗೆ ಮರ ತೆರವುಗೊಳಿಸಿದೆ. ಇನ್ನು ಸಾಕಷ್ಟು ಕಡೆ ವಿದ್ಯುತ್ ಕಂಬಗಳು ಬಿದ್ದಿವೆ. ಮನೆಗಳು ಶೀಟ್ ಹಾರಿಕೊಂಡು ಹೋಗಿವೆ. ಹೊನ್ನಾವರ, ಭಟ್ಕಳ, ಕಾರವಾರ, ಕುಮಟಾ, ಅಂಕೋಲಾದಲ್ಲಿ ಕಡಲ ಮೊರೆತ ಜೋರಾಗಿದೆ. ಹೊನ್ನಾವರ ತಾಲೂಕಿನ ಪಾವಿನಕುರ್ವಾದ ಆಶ್ರಯ ಕೇಂದ್ರದಲ್ಲಿ 50 ಜನರು ಆಶ್ರಯ ಪಡೆದಿದ್ದಾರೆ.