ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆ ಆಗಿರುವ ಶಾಸಕರಿಗೆ ಮೂರು ದಿನಗಳ ಕಾಲ ತರಬೇತಿ ನಡೆಯಲಿದೆ. ನೆಲಮಂಗಲದಲ್ಲಿರುವ ಕ್ಷೇಮವನದಲ್ಲಿ ಶಿಬಿರ ಆಯೋಜಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಸ್ಪೀಕರ್ ಯು.ಟಿ ಖಾದರ್ ಅಧ್ಯಕ್ಷತೆ ವಹಿಸಿಕೊಳ್ಳುವವರು. ಪರಿಷತ್ ಸಭಾಪತಿ ಹೊರಟ್ಟಿ, ಸಚಿವರಾದ ಎಚ್.ಕೆ ಪಾಟೀಲ್, ಕೆ.ಜೆ ಜಾರ್ಜ್, ರಾಮಲಿಂಗ ರೆಡ್ಡಿ ಸೇರಿ ಅನೇಕರು ಉಪಸ್ಥಿತಿ ಇರಲಿದ್ದಾರೆ.
ಮುಂಜಾನೆ 6ರಿಂದ 9ಗಂಟೆಯ ತನಕ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ, 10 ಗಂಟೆಯಿಂದ ಹಿರಿಯ ರಾಜಕೀಯ ನಾಯಕರಿಂದ ವಿವಿಧ ವಿಷಯಗಳ ಕುರಿತು ಉಪನ್ಯಾಸ. ಜೊತೆಗೆ ಕಲಾಪದಲ್ಲಿ ಭಾಗವಹಿಸುವಾಗ ಪಾಲಿಸಬೇಕಾದ ನಿಯಮಗಳು, ನಿಲುವಳಿ ಸೂಚನೆ, ನಿಯಮ 69, ವಿಶ್ವಸ ಹಾಗೂ ಅವಿಶ್ವಾಸದ ಕುರಿತು ತಿಳುವಳಿಕೆ ನೀಡಲಿದ್ದಾರೆ. ಹೀಗಾಗಿ ಸರ್ವಪಕ್ಷದ ನಾಯಕರು ಸಂವಾದ ನಡೆಸಲಿದ್ದಾರೆ.
ಇದರ ಜೊತೆಗೆ ರಾಜ್ಯಸಭಾ ಸದಸ್ಯ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಬ್ರಹ್ಮಕುಮಾರೀಸ್ ಸಂಸ್ಥೆಯ ಬಿ.ಕೆ ವೀಣಾ, ಬಿ.ಕೆ ಭುವನೇಶ್ವರಿ ಹಾಗೂ ಇಸ್ಲಾಮಿ ಹಿಂದ್ ನ ಮಹಮ್ಮದ್ ಕುಂಞ ಅವರು ಮಾತನಾಡಲಿದ್ದಾರೆ.