ಪ್ರಜಾಸ್ತ್ರ ಸುದ್ದಿ
ವಿಜಯಪುರ: ಮಳೆಯಾಗಲಿ ಎಂದು ರಾಜ್ಯದ ಅನೇಕ ಭಾಗಗಳಲ್ಲಿ ಹಲವು ರೀತಿಯ ಧಾರ್ಮಿಕ ಆಚರಣೆಗಳನ್ನು ಮಾಡಲಾಗುತ್ತಿದೆ. ಕೆಲವು ಕಡೆ ಕಪ್ಪೆಗಳ ಮದುವೆ, ಕತ್ತೆಗಳ ಮದುವೆ ರೀತಿಯ ಕೆಲ ವಿಚಿತ್ರ ಆಚರಣೆಯೂ ನಡೆದಿವೆ. ಇದೀಗ ವಿಜಯಪುರ ಜಿಲ್ಲೆಯಲ್ಲಿ ಮಳೆಗಾಗಿ ಸ್ಮಶಾನದಲ್ಲಿನ ಗೋರಿಗಳಿಗೆ ನೀರುಣಿಸುವ ಕೆಲಸ ಮಾಡಲಾಗಿದೆ.
ಹೌದು, ಜಿಲ್ಲೆಯ ತಾಳಿಕೋಟಿ ತಾಲೂಕಿನ ಕಲಕೇರಿಯಲ್ಲಿ ಕೆಲ ಗ್ರಾಮಸ್ಥರು ಟ್ಯಾಂಕರ್ ಮೂಲಕ ನೀರು ತಂದು ಗೋರಿಗಳಿಗೆ ನೀರುಣಿಸಿದ್ದಾರೆ. ಶವಗಳ ಬಾಯಿಗೆ ನೀರು ಹಾಕಿದರೆ ಮಳೆಯಾಗುತ್ತೆ ಅನ್ನೋ ನಂಬಿಕೆ ಇವರದ್ದು. ಇದನ್ನು ಕೇಳಿದ, ನೋಡಿದ ಕೆಲವರು ಇದೆಲ್ಲ ಮೌಢ್ಯಾಚರಣೆ. ಗೋರಿಯೊಳಗಿನ ಶವಗಳಿಗೆ ನೀರುಣಿಸುವುದು, ಗೋರಿ ಮೇಲೆ ಕುಳಿತು ಪ್ರಾರ್ಥನೆ ಮಾಡುವುದು ಮೌಢ್ಯತೆ ಎಂದು ಇದನ್ನು ವಿರೋಧಿಸಿದ್ದಾರೆ.