ಯಲಹಂಕ ಕೇಂದ್ರೀಯ ವಿಹಾರ ವಸತಿ ಕಟ್ಟಡಕ್ಕೆ ಸಿಎಂ ಭೇಟಿ

190

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕಳೆದ ಹಲವು ದಿನಗಳಿಂದ ಭರ್ಜರಿಯಾಗಿ ಮಳೆಯಾಗುತ್ತಿದೆ. ಇದರ ಪರಿಣಾಮ ಸಿಲಿಕಾನ್ ಸಿಟಿಯ ಜನರ ಜೀವನ ಹೇಳತೀರದಾಗಿದೆ. ಅನೇಕ ಕಡೆ ದೊಡ್ಡ ದೊಡ್ಡ ಕಟ್ಟಡದೊಳಗೆ ನೀರು ನುಗ್ಗಿವೆ.

ನಗರದ ಯಲಹಂಕದ ಕೇಂದ್ರೀಯ ವಿಹಾರ ವಸತಿ ಕಟ್ಟಡ ಸಂಪೂರ್ಣವಾಗಿ ಜಲಾವೃತ್ತಗೊಂಡಿದೆ. ಈ ಬಗ್ಗೆ ಸಾಕಷ್ಟು ಸುದ್ದಿಯಾಗಿದೆ. ಅಧಿಕಾರಿಗಳು ಮಾಡಿದ ಯಡವಟ್ಟೋ ಅಥವ ಕಟ್ಟಡ ಕಟ್ಟುವ ವೇಳೆ ಮಳೆಯ ಬಗ್ಗೆ ವಹಿಸಬೇಕಾದ ಎಚ್ಚರಿಕೆ ವಹಿಸದೆ ಇರುವ ಪರಿಣಾಮವೋ ಅಪಾರ್ಟ್ ಮೆಂಟ್ ಜಲಾವೃತ್ತಗೊಂಡಿದೆ. ಹೀಗಾಗಿ ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಈ ವೇಳೆ ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಸೇರಿ ಅಧಿಕಾರಿಗಳಿದ್ದರು.




Leave a Reply

Your email address will not be published. Required fields are marked *

error: Content is protected !!