ಪ್ರಜಾಸ್ತ್ರ ಸುದ್ದಿ
ವಿಜಯಪುರ: ಜಿಲ್ಲೆಯ ಕಲಕೇರಿ ಠಾಣೆ ವ್ಯಾಪ್ತಿಯ ಸಲಾದಹಳ್ಳಿ ಗ್ರಾಮದ ಹೊರವಲಯದಲ್ಲಿ ಪ್ರೇಮಿಗಳಿಬ್ಬರ ಹತ್ಯೆಯಾಗಿತ್ತು. ಅನ್ಯಕೋಮಿನ ಪ್ರೇಮ ಪ್ರಕರಣ ಮರ್ಯಾದೆ ಹತ್ಯೆಯಲ್ಲಿ ಅಂತ್ಯವಾಗಿತ್ತು. ಈ ಸಂಬಂಧ ನಾಲ್ವರು ಆರೋಪಿಗಳನ್ನ ಕಲಕೇರಿ ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ಯುವತಿ ತಂದೆ ಬಂದಗಿಸಾಬ್ ತಂಬದ್(50), ಸಹೋದರ ದಾವಲ್ ಪಟೇಲ್(20), ಅಳಿಯಂದರಾದ ಅಲ್ಲಾ ಪಟೇಲ್(29) ಹಾಗೂ ರಫೀಕ್(24) ಬಂಧಿತ ಆರೋಪಿಗಳಾಗಿದ್ದಾರೆ. ಇನ್ನೋರ್ವ ಆರೋಪಿ ಲಾಳೆಸಾಬ್ ಗಾಗಿ ಹುಡುಕಾಟ ನಡೆಸಿದ್ದಾರೆ.
ಕಳೆದ ಮಂಗಳವಾರ ಸಲಾದಹಳ್ಳಿಯ ಹೊರವಲಯದಲ್ಲಿ ಬಸವರಾಜ ಹಾಗೂ ಯುವತಿಯನ್ನ ಹೊಡೆದು ಕೊಲೆ ಮಾಡಿದ ಘಟನೆ ನಡೆದಿದೆ.