ಸಿದ್ದು ಆಯ್ತು, ಈಗ ಪರಂ ಮುಂದಿನ ಸಿಎಂ ಎಂದು ಘೋಷಣೆ

246

ಪ್ರಜಾಸ್ತ್ರ ಸುದ್ದಿ

ಮೈಸೂರು: ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಬಗ್ಗೆ ಈಗಾಗ್ಲೇ ದೊಡ್ಡ ಚರ್ಚೆ ನಡೆದಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯನವರ ಬೆಂಬಲಿತ ಶಾಸಕರು ಬಹಿರಂಗವಾಗಿ ಮುಂದಿನ ಸಿಎಂ ಸಿದ್ದರಾಮಯ್ಯ ಅಂತಿದ್ದಾರೆ. ಹೀಗಾಗಿ ಇದು ಹೈಕಮಾಂಡ್ ತನಕ ಹೋಗಿದ್ದು, ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.

ಇದೆಲ್ಲದರ ನಡುವೆ ಇಂದು ಮೈಸೂರಿನಲ್ಲಿ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ ಅವರನ್ನ ಮುಂದಿನ ಸಿಎಂ ಎಂದು ಅವರ ಅಭಿಮಾನಿಗಳು ಘೋಷಣೆ ಕೂಗಿದ್ದಾರೆ. ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಅಭಿಮಾನಿಗಳು, ನೆಕ್ಸ್ಟ್ ಸಿಎಂ ಎಂದು ಘೋಷಣೆ ಕೂಗಿದ್ದಾರೆ.

ಅಭಿಮಾನಿಗಳ ಘೋಷಣೆಯಿಂದಾಗಿ ಪರಮೇಶ್ವರ ಅವರು ಒಂದಿಷ್ಟು ಸಿಟ್ಟಾದಂತೆ ಕಂಡು ಬಂದಿತು. ಡಿ.ಕೆ ಶಿವಕುಮಾರ, ಸಿದ್ದರಾಮಯ್ಯ ಸೇರಿದಂತೆ ದಲಿತ ನಾಯಕರ ಹೆಸರು ಕೇಳಿ ಬರ್ತಿದ್ದು, ಅದಕ್ಕೆ ಪುಷ್ಠಿ ನೀಡುವಂತೆ ಡಾ.ಜಿ ಪರಮೇಶ್ವರ ಪರವಾಗಿ ಘೋಷಣೆ ಕೂಗಲಾಗಿದೆ.




Leave a Reply

Your email address will not be published. Required fields are marked *

error: Content is protected !!