ಪ್ರಜಾಸ್ತ್ರ ಸುದ್ದಿ
ತುಮಕೂರು: ತೋಟದಲ್ಲಿನ ಬಾವಿಗೆ ಆಕಸ್ಮಿಕವಾಗಿ ಬಿದ್ದ ಮಕ್ಕಳನ್ನ ರಕ್ಷಿಸಲು ಹೋದ ತಾಯಿಯೂ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ತಾಲೂಕಿನ ತಿರುಮಲಪಾಳ್ಯದ ಬಳಿಯಿರುವ ತೋಟದಲ್ಲಿ ಈ ದುರ್ಘಟನೆ ನಡೆದಿದೆ.
ತಾಯಿ ಹೇಮಲತಾ(38), ಮಕ್ಕಳಾದ ಪೂರ್ವಿಕಾ(3) ಹಾಗೂ ಮಾನಸ(6) ಮೃತ ದುರ್ದೈವಿಗಳು. ತೋಟದ ಕೆಲಸಕ್ಕೆಂದು ಹೇಮಲತಾ ಮಕ್ಕಳೊಡನೆ ಬಂದಿದ್ದಾರೆ. ಸೀಬೆ ಗಿಡದ ಬಳಿ ಆಟವಾಡ್ತಿದ್ದ ಮಕ್ಕಳು ಬಾವಿ ಬಳಿ ಬಂದಾಗ ಅನಾಹುತ ನಡೆದಿದೆ.
ಮೊದಲು ಮೂರು ವರ್ಷದ ಪೂರ್ವಿಕಾ ಬಿದ್ದಿದ್ದಾಳಂತೆ, ಬಳಿಕ 6 ವರ್ಷದ ಮಾನಸ ಬಿದ್ದಿದ್ದಾಳೆ. ಮಕ್ಕಳು ಬಾವಿಗೆ ಬಿದ್ದಿದ್ದನ್ನು ನೋಡಿದ ತಾಯಿ ಅವರನ್ನ ರಕ್ಷಿಸಲು ಹೋಗಿದ್ದಾರೆ. ಆದ್ರೆ, ಮೂವರು ಮೇಲೆ ಬರಲು ಆಗದೆ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗ್ತಿದೆ. ಕುಟುಂಬಸ್ಥರ ಆಕ್ರಂದನ ನೋಡಲಾಗದು. ಸ್ಥಳಕ್ಕೆ ಎಸ್ಪಿ, ಡಿವೈಎಸ್ಪಿ, ಸಿಪಿಐ ಸೇರಿದಂತೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿದೆ.