ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಪತಿ ಹತ್ಯೆಯಾಗಿ ಮೂರು ವರ್ಷಗಳ ಪತ್ನಿಯನ್ನ ಸಹ ಕೊಲೆ ಮಾಡಿರುವ ಘಟನೆ ಗುರುವಾರ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಮಾಜಿ ಮಹಿಳಾ ಕಾರ್ಪೋರೇಟರ್ ರೇಖಾ ಕದಿರೇಶ ಅವರನ್ನ ದುಷ್ಕರ್ಮಿಗಳು ಅವರ ಮನೆಯ ಮುಂದೆಯೇ ಹತ್ಯೆ ಮಾಡಿದ್ದಾರೆ.
ಬಿಜೆಪಿ ಮಾಜಿ ಕಾರ್ಪೋರೇಟರ್ ರೇಖಾ ಕೊಲೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತ್ನಾಡಿರುವ ಸಿಎಂ ಬಿ.ಎಸ್ ಯಡಿಯೂರಪ್ಪ, 24 ಗಂಟೆಯೊಳಗೆ ಹಂತಕರನ್ನ ಹಿಡಿಯುವ ಕೆಲಸ ಮಾಡಲಾಗುತ್ತೆ. ಅವರ ವಿರುದ್ಧ ಎಲ್ಲ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನ ತೆಗೆದುಕೊಳ್ಳಲಾಗುತ್ತೆ ಎಂದಿದ್ದಾರೆ.
2018ರಲ್ಲಿ ರೇಖಾ ಪತಿ ಕದಿರೇಶನನ್ನ ಮನೆಯ ಹತ್ತಿರದ ಮುನೇಶ್ವರ ದೇವಸ್ಥಾನದ ಬಳಿ ಹತ್ಯೆ ಮಾಡಲಾಗಿತ್ತು. 2012ರಿಂದ ರೌಡಿಶೀಟರ್ ಆಗಿದ್ದ ಕದಿರೇಶನ ವಿರುದ್ಧ 13 ಪ್ರಕರಣಗಳು ದಾಖಲಾಗಿದ್ದವು. ಈತ ಬಿಜೆಪಿ ಸಂಸದ ಪಿಸಿ ಮೋಹನ ಕಟ್ಟಾ ಬೆಂಬಲಿಗನಾಗಿದ್ದ.