ಮರಗಳ ಹತ್ಯೆಗೆ ಸುಪ್ರೀಂ ತಡೆಯಾಜ್ಞೆ

323

ಮುಂಬೈ: ನಗರದ ಆರೇ ಕಾಲೋನಿಯಲ್ಲಿ ಮೆಟ್ರೋ ನಿರ್ಮಾಣ ಕಾಮಗಾರಿ ಸಂಬಂಧ ಮರಗಳನ್ನ ಕಡಿಯುವ ಮಹಾರಾಷ್ಟ್ರ ಸರ್ಕಾರದ ಕಾರ್ಯಕ್ಕೆ, ಸುಪ್ರೀಂ ಕೋರ್ಟ್ ಇಂದು ತಡೆಯಾಜ್ಞೆ ನೀಡಿದೆ. ಮುಂದಿನ ಆದೇಶದವರೆಗೂ ಮರಗಳನ್ನ ಕಡಿಯವ ಕೆಲಸ ನಿಲ್ಲಸಬೇಕೆಂದು ರಜಾ ಪೀಠ ಹೇಳಿದೆ.

ಮೆಟ್ರೋ ಕಾರ್ ಶೆಡ್ ನಿರ್ಮಾಣಕ್ಕಾಗಿ 2,500 ಮರಗಳನ್ನ ಕಡಿಯಲು ಮುಂಬೈ ಮೆಟ್ರೋ ನಿಗಮ ರೆಡಿಯಾಗಿತ್ತು. ಇದಕ್ಕೆ ಪರಿಸರವಾದಿಗಳ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ರಾತ್ರೋರಾತ್ರಿ ಮರಗಳನ್ನ ಕಡಿಯಲಾಗಿತ್ತು. ಇದರ ವಿರುದ್ಧ ಪ್ರತಿಭಟನೆ ನಡೆಸಿದ 29 ಮಂದಿಯನ್ನ ಬಂಧಿಸಲಾಗಿತ್ತು. ಇದನ್ನ ಖಂಡಿಸಿ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ ಗೊಗಯ್ ಅವರಿಗೆ ಪತ್ರ ಬರೆದಿದ್ರು.

ವಿದ್ಯಾರ್ಥಿಗಳು ಬರೆದ ಪತ್ರದ ಆಧಾರದ ಮೇಲೆ ಇದರ ಬಗ್ಗೆ ವಿಚಾರಣೆ ನಡೆಸಲು ಇಬ್ಬರು ನ್ಯಾಯಮೂರ್ತಿಗಳ ವಿಶೇಷ ನ್ಯಾಯಪೀಠಿ ರಚಿಸಲಾಗಿತ್ತು. ಸುಪ್ರೀಂ ಕೋರ್ಟ್ ನ ಆದೇಶ ಪರಿಸರವಾದಿಗಳಿಗೆ ಖುಷಿ ತಂದಿದೆ.




Leave a Reply

Your email address will not be published. Required fields are marked *

error: Content is protected !!