ಮಾಜಿ ಸಿಎಂಗಳಿಗೆ ಸಂಸದೆ ಚಾಲೆಂಜ್

354

ಮೈಸೂರು: ರಾಜ್ಯದ ಪ್ರವಾಹಕ್ಕೆ ಸಂಬಂಧಿಸಿದಂತೆ ಕೇಂದ್ರವು ಸರಿಯಾಗಿ ಸ್ಪಂದಿಸಿದೆ. ಯುಪಿಎ ಸರ್ಕಾರವಿದ್ದಾಗ ರಾಜ್ಯಕ್ಕೆ ಎಷ್ಟು ಹಣ ಬಿಡುಗಡೆಯಾಗಿದೆ ಅಂತಾ  ಮಾಜಿ ಸಿಎಂ ಸಿದ್ದರಾಮಯ್ಯ ಹೇಳಲಿ ಎಂದು, ಸಂಸದೆ ಶೋಭಾ ಕರಂದ್ಲಾಜೆ ಕಿಡಿ ಕಾರಿದ್ದಾರೆ. ಸಿದ್ದರಾಮಯ್ಯನವರು ತಮ್ಮ ಆಡಳಿತವಾಧಿಯಲ್ಲಿ ಎಷ್ಟು ಸಾಲ ಮಾಡಿದ್ದಾರೆ ಅನ್ನೋದು ಬಹಿರಂಗ ಪಡಿಸಲಿ ಅಂತಾ ಸವಾಲು ಹಾಕಿದ್ದಾರೆ.

ಮತ್ತೊಬ್ಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಬಗ್ಗೆ ಮಾತ್ನಾಡಿದ ಸಂಸದೆ ಶೋಭಾ ಕರಂದ್ಲಾಜೆ, ನಮ್ಮ ಊರಿಗೆ ಬಂದು ನೋಡಲಿ ಯಾರು ರೈತನ ಮಗಳು ಎಂದು ತಿಳಿಯುತ್ತದೆ. ಚಾರ್ವಕ ಎಲ್ಲಿ ಬರುತ್ತದೆ ಮೊದಲು ತಿಳಿದುಕೊಳ್ಳಲಿ. ಮಾಜಿ ಸಿಎಂ ಕುಮಾರಸ್ವಾಮಿ ಆಲೂಗೆಡ್ಡೆ ಮಾರಿ ಶ್ರೀಮಂತರಾದವರು ಅಂತಾ ಟಾಂಗ್ ಕೊಟ್ಟಿದ್ದಾರೆ. ರೈತರ ಕಷ್ಟ ಸಂಸದರಿಗೇನು ಗೊತ್ತು ಅನ್ನೋ ಮಾತಿಗೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!