ಪ್ರಜಾಸ್ತ್ರ ಸುದ್ದಿ
ಅಮ್ರೇಲಿ: ಅಹಮದಾಬಾದ್ ನ ಅಮ್ರೇಲಿ ಜಿಲ್ಲೆಯ ಬರ್ಡಾ ಗ್ರಾಮದಲ್ಲಿ ಲಾರಿಯೊಂದು ಗುಡಿಸಲಿಗೆ ನುಗ್ಗಿದ ಇದರ ಪರಿಣಾಮ 8 ಜನ ಅಮಾಯಕರು ಸಾವನ್ನಪ್ಪಿದ್ದಾರೆ. ಅಲ್ದೇ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾಜ್ ಕೋಟ್ ನಿಂದ ಅಮ್ರೇಲಿ ಜಿಲ್ಲೆಯ ಜಫ್ರಾಬಾದ್ ಕಡೆ ಹೊರಟಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬರ್ಡಾ ಗ್ರಾಮದ ರೈಲ್ವೆ ಲೆವಲ್ ಕ್ರಾಸ್ ಹತ್ತಿರದ ರಸ್ತೆ ಪಕ್ಕದಲ್ಲಿನ ಗುಡಿಸಲಕ್ಕೆ ಹೋಗಿ ಗುದ್ದಿದೆ. ಇದರ ಪರಿಣಾಮ ಅಲ್ಲಿ ಮಲಗಿದ್ದ 10 ಜನರಲ್ಲಿ 8 ಜನರು ಪ್ರಾಣ ಕಳೆದುಕೊಂಡಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ತನಿಖೆ ನಡೆಸುವಂತೆ ಸಿಎಂ ರೂಪಾನಿ ಜಿಲ್ಲಾಧಿಕಾರಿಗೆ ಆದೇಶಿಸಿದ್ದಾರೆ. ಮೃತರ ಕುಟುಂಬಗಳಿಗೆ ನಾಲ್ಕು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.