ಪ್ರಜಾಸ್ತ್ರ ಸಿನಿಮಾ ಡೆಸ್ಕ್
ರೈತರನ್ನ, ರೈತ ಹೋರಾಟಗಾರರನ್ನ ಉಗ್ರರು ಎಂದು ಕರೆದಿರುವ ಬಾಲಿವುಡ್ ನಟಿ ಕಂಗನಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ತುಮಕೂರು ಕೋರ್ಟ್ ನಿರ್ದೇಶನ ನೀಡಿದೆ. ಸೆಪ್ಟೆಂಬರ್ 25ರಂದು ಹೈಕೋರ್ಟ್ ವಕೀಲ ರಮೇಶ ನಾಯಕ ಕೇಸ್ ದಾಖಲಿಸಿದ್ರು.
ತುಮಕೂರು ಜೆಎಂಎಫ್ ಸಿ ಕೋರ್ಟ್ ನಲ್ಲಿ ದೂರು ದಾಖಲಿಸಿದ್ರು. ಇದೀಗ ಕ್ಯಾತ್ಸಂದ್ರ ಠಾಣೆ ಪೊಲೀಸರಿಗೆ, ನಟಿ ಕಂಗನಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ನಿರ್ದೇಶನ ನೀಡಿದೆ.
ಎಪಿಎಂಸಿ, ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದಿರುವ ಕುರಿತು ರೈತರು, ರೈತ ಪರ ಸಂಘಟನೆಗಳು ದೇಶವ್ಯಾಪಿ ಹೋರಾಟ ನಡೆಸಿದ್ವು. ಈ ಬಗ್ಗೆ ಟ್ವೀಟ್ ಮಾಡಿದ್ದ ನಟಿ ಕಂಗನಾ, ಇವರನ್ನ ಉಗ್ರರಿಗೆ ಹೋಲಿಕೆ ಮಾಡಿದ್ಳು.