ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಮುಂಬೈ ಮುನ್ಸಿಪಲ್ ಕಾರ್ಪೂರೇಷನ್ ವಿರುದ್ಧದ ಕಾನೂನು ಹೋರಾಟದಲ್ಲಿ ಮೊದಲ ಜಯ ಸಾಧಿಸಿದ್ದಾರೆ. ಕಂಗನಾಗೆ ಸೇರಿದ ಕಟ್ಟಡದ ಒಂದು ಭಾಗ ಒಡೆದಿರುವುದು ದುರುದ್ದೇಶದಿಂದ ಕೂಡಿದೆ ಎಂದು ಕೋರ್ಟ್ ಹೇಳಿದೆ.
ನ್ಯಾಯಾಧೀಶರಾದ ಆರ್.ಐ ಚಾಗ್ಲಾ ಹಾಗೂ ಎಸ್.ಜೆ ಕಾತಾವಾಲ ಅವರಿದ್ದ ವಿಭಾಗೀಯ ಪೀಠ, ಕಂಗನಾಗೆ ಸೇರಿರುವ ಕಟ್ಟಡ ತೆರವು ಮಾಡುವುದಕ್ಕೆ ತಡೆ ನೀಡಿದೆ. ಕಾರ್ಪೂರೇಷನ್ ಯಾವುದೇ ವ್ಯಕ್ತಿಗಳ ವಿರುದ್ಧ ಬಲಪ್ರಯೋಗ ಮಾಡಬಾರದು ಎಂದು ಹೇಳಿದೆ.
ಬಾಂದ್ರಾದಲ್ಲಿರುವ ಪಲಿಹಿಲ್ ಬಾಂಗ್ಲಾ ಕಟ್ಟಡ ಕಂಗನಾಗೆ ಸೇರಿದೆ. ಮುಂಬೈ ಸರ್ಕಾರ ಹಾಗೂ ಕಂಗನಾ ನಡುವಿನ ಗುದ್ದಾಟ ನಡೆಯುತ್ತಿರುವ ಸಂದರ್ಭದಲ್ಲಿ ಈ ಕಟ್ಟಡ ಅಕ್ರಮವಾಗಿದೆ ಎಂದು ಕಾರ್ಪೂರೇಷನ್ ಒಂದು ಭಾಗವನ್ನ ಕಳೆದ ಸೆಪ್ಟೆಂಬರ್ 9ರಂದು ಒಡೆದು ಹಾಕಿತ್ತು. ಇದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ರು.